ಕನ್ನಡದಲ್ಲಿ ಪ್ರಧಾನಿ ಮೋದಿ ಟ್ವೀಟ್, ರಾಜ್ಯ ಸಭೆಗೆ ಡಾ. ಹೆಗ್ಗಡೆಯವರ ನಾಮನಿರ್ದೇಶನ ಕುರಿತು ಮಾಹಿತಿ:‌ ಪ್ರಾದೇಶಿಕ ಭಾಷೆಗೆ ಒತ್ತು, ತಮಿಳು, ಮಲಯಾಳ, ತೆಲುಗಿನಲ್ಲೂ ಟ್ವೀಟ್

 

 

ಬೆಳ್ತಂಗಡಿ: ಪ್ರಧಾನಿ‌ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭೆಗೆ ನಾಮನಿರ್ದೇಶನಗೊಂಡಿರುವ ಕುರಿತು ಮಾಹಿತಿ ನೀಡಿದ್ದಾರೆ.

 

 


ಕೆಲ ನಿಮಿಷಗಳ ಹಿಂದೆ ಆಂಗ್ಲ ಭಾಷೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಳಿಕ ಪ್ರಾದೇಶಿಕ ಭಾಷೆಗೆ ತರ್ಜುಮೆ ಮಾಡಿ ಟ್ವೀಟ್ ‌ಮಾಡಿದ್ದಾರೆ.

 

 

 

ಪ್ರಾದೇಶಿಕ ಭಾಷೆಗೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸಂಗೀತ ಸಂಯೋಜಕ ಇಳಯರಾಜ, ಅವರ ಕುರಿತು ತಮಿಳು, ಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ತಂದೆ, ಕಥೆ ರಚನೆಗಾರ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರ ಕುರಿತು ತೆಲುಗು, ಅಥ್ಲೀಟ್ ಪಿ.ಟಿ. ಉಷಾ ಅವರ ಕುರಿತು ಮಲಯಾಳಂ ‌ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಗಮನ‌ಸೆಳೆದಿದ್ದಾರೆ.

 

error: Content is protected !!