ನಿಡ್ಲೆ ಅಪಾಯಕಾರಿ ಕೆರೆಯ ಬಳಿ ಅಪಘಾತ ಕಾರುಗಳೆರಡು ಮುಖಾಮುಖಿ ಡಿಕ್ಕಿ ತಪ್ಪಿದ ದುರಂತ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

 

 

 

ಬೆಳ್ತಂಗಡಿ: ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಕಂಡ ಬಳಿ ರಾಜ್ಯ ಹೆದ್ದಾರಿಯಲ್ಲಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದ್ದು ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತಿದ್ದ ಹಾಗೂ ಪೆರಿಯ ಶಾಂತಿ ಕಡೆಯಿಂದ ಧರ್ಮಸ್ಥಳಕ್ಕೆ ಬರುತಿದ್ದ ಕಾರುಗಳ ನಡುವೆ ನಿಡ್ಲೆ ಬಳಿಯ ಕೆರೆಕಂಡ ಎಂಬಲ್ಲಿ ಡಿಕ್ಕಿ ಸಂಭವಿಸಿದೆ. ಕಾರುಗಳು‌ ಜಖಂಗೊಂಡಿದ್ದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

 

ಎಂದು ತಿಳಿದು ಬಂದಿದೆ ಅಪಘಾತ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಅಪಾಯಕಾರಿ ತಡೆಗೋಡೆಗಳಿಲ್ಲದ ಕೆರೆಯೊಂದು ಇದ್ದು ಅದೃಷ್ಟವಶಾತ್ ಯಾವುದೇ ದೊಡ್ಡ ದುರಂತ ಸಂಭವಿಸಿಲ್ಲ ತಡೆಗೋಡೆ ಇಲ್ಲದ ಅಪಾಯಕಾರಿ ಈ ಕೆರೆಯ ಬಗ್ಗೆ ಕಳೆದ ವಾರವಷ್ಟೇ ಪ್ರಜಾಪ್ರಕಾಶ ನ್ಯೂಸ್ ಎಚ್ಚರಿಕೆಯ ವಿಸ್ಕ್ತತ ವರದಿಯನ್ನು ಪ್ರಸಾರ ಮಾಡಿತ್ತು.

error: Content is protected !!