ರಂಗೋಲಿಯಲ್ಲಿ‌‌ ಮೂಡಿದ‌ ನಾಳ ಶ್ರೀ ದುರ್ಗಾಪರಮೇಶ್ವರಿ: ಕಲಾವಿದ ಗಣೇಶ್ ಗುಂಪಲಾಜೆ ಕೈಯಲ್ಲಿ ‌ಅರಳಿದ ದೇವಿ

 

 

ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕ್ಷೇತ್ರದಲ್ಲಿ ನೀಡಿದ ಭಜನಾ ಸ್ಪರ್ಧೆಯ ಸಂದರ್ಭ ಬಿಡಿಸಲಾದ ನಾಳದ ದೇವಿಯ ರಂಗೋಲಿ ಭಕ್ತವರ್ಗವನ್ನು ಬೆರಗುಗೊಳಿಸಿದೆ.
ಕಲಾವಿದ ಗಣೇಶ್ ಗುಂಪಲಾಜೆ ಅವರು ‌ಈ ರಂಗೋಲಿಯನ್ನು ರಚಿಸಿದ್ದು, ನೋಡುಗರನ್ನು ಸೆಳೆದಿದೆ. ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಹಾಗೂ ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಗೆ ಭಜನಾ ಸ್ಪರ್ಧೆ ಹಮ್ಮಿಕೊಂಡಿದ್ದು, ನಾಳದಲ್ಲಿ ನಡೆದ ಸಂದರ್ಭದಲ್ಲಿ ‌ಈ ರಂಗೋಲಿ ಬಿಡಿಸಲಾಗಿದೆ. ಸುಗ್ಗು ಸ್ಟುಡಿಯೋ ಬೆಳ್ತಂಗಡಿಯ ಸುಗುಣೇಂದ್ರ ಅವರು ರಂಗೋಲಿ ಛಾಯಾಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

error: Content is protected !!