ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾ.ಪಂ ಗೆ ಎಸಿಬಿ ದಾಳಿ, ಲಂಚ ಸ್ವೀಕರಿಸುತಿದ್ದ ಪಿಡಿಒ ಬಲೆಗೆ

 

 

 

 

ಬೆಳ್ತಂಗಡಿ: ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ಗೆ ಎಸಿಬಿ ದಾಳಿಯಾಗಿದ್ದು ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಅವರು  ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಮಾಲಾಡಿ ಗ್ರಾಮ ಪಂಚಾಯತ್ ಕಛೇರಿಯೊಳಗೆ ಪಿಡಿಓ  ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಅಗಿ ಸೆರೆ ಸಿಕ್ಕಿದ್ದಿದ್ದಾರೆ.

9/11 ಮಾಡಿಕೊಡಲು 15,000 ರೂಪಾಯಿ ಲಂಚ ಆರೋಪದಡಿಯಲ್ಲಿ ದ‌.ಕ‌.ಭ್ರಷ್ಟಾಚಾರ ನಿಗ್ರಹ ದಳದ

ಎಸಿಬಿ ಇನ್ಸ್ಪೆಕ್ಟರ್ ಗುರುರಾಜ್ ಮತ್ತು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಗ್ರಾಮ ಪಂಚಾಯತ್ ಪಿಡಿಓ ರವಿಯವರನ್ನು ಕಛೇರಿಯಲ್ಲಿ ಪ ವಿಚಾರಣೆ ನಡೆಸಲಾಗುತ್ತಿದೆ.

error: Content is protected !!