ಶಾಸಕರ ಕಚೇರಿ ” ಶ್ರಮಿಕ” ಕ್ಕೆ ಭೇಟಿ ‌ನೀಡಿದ ವಾಗ್ಮಿ ಹಾರಿಕಾ ಮಂಜುನಾಥ್ ಇಂದು ಬೆಳ್ತಂಗಡಿಯಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ. ಲಾಯಿಲದಿಂದ ಬೃಹತ್ ಮೆರವಣಿಗೆ ಲಾಯಿಲ ಹಿಂದೂ ಕಾರ್ಯಕರ್ತರಿಂದ ಮಜ್ಜಿಗೆ ವ್ಯವಸ್ಥೆ

 

 

 

 

 

ಬೆಳ್ತಂಗಡಿ:ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಗೀತಾ ಜಯಂತಿ ಅಂಗವಾಗಿ ಬೃಹತ್ ಶೌರ್ಯ ಸಂಚಲನಾ ಕಾರ್ಯಕ್ರಮ ವಿಶ್ವಹಿಂದೂ ಪರಿಷತ್ ಭಜರಂಗದಳ ಮಾತೃಮಂಡಳಿ, ದುರ್ಗಾ ವಾಹಿನಿ, ಬೆಳ್ತಂಗಡಿ ಪ್ರಖಂಡ ವತಿಯಿಂದ ಸಂಚಲನಾ ಕಾರ್ಯಕ್ರಮ ಇವತ್ತು ಮಧ್ಯಾಹ್ನ ಗುರುವಾಯನಕೆರೆ ಸಮೀಪದಲ್ಲಿರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಖರ ಯುವ ವಾಗ್ಮಿ ಹಾರಿಕಾ ಮಂಜುನಾಥ್ ದಿಕ್ಷೂಚಿ ಭಾಷಣಮಾಡಲಿದ್ದು ಇವರು ಬೆಳ್ತಂಗಡಿ ಶಾಸಕರ ಕಚೇರಿ “ಶ್ರಮಿಕ ” ಕ್ಕೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ಗೌರವಿಸಿದರು

 

 

 

ಶೌರ್ಯ ಸಂಚಲನದ ಮೆರವಣಿಗೆ ಮದ್ಯಾಹ್ನ ಇಂದು 3 ಗಂಟೆಗೆ ಲಾಯಿಲ ವೆಂಕಟರಮಣ ದೇವಸ್ಥಾನದ ವಠಾರದಿಂದ ಸಂಘಟನೆಯ ಪ್ರಮುಖರಿಂದ ಶಂಖನಾದದೊಂದಿಗೆ ಪ್ರಾರಂಭಗೊಂಡು , ಬೆಳ್ತಂಗಡಿ ನಗರದ ಮುಖ್ಯರಸ್ತೆಯ ಮೂಲಕ ಸಾಗಿ ಗುರುವಾಯನಕೆರೆ ಸಭಾಭವನಕ್ಕೆ ಬಂದ್ದು ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀರಾಮಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ಮಾಡಲಿದ್ದಾರೆ.‌
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಉದ್ಯಮಿ ರಾಗ್ನೇಶ್ ವಹಿಸಿಕೊಳ್ಳಲಿದ್ದು ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಕಾರ್ಯಕರ್ತರಿಗೆ ಮಜ್ಹಿಗೆಯ ವ್ಯವಸ್ಥೆಯನ್ನು ಲಾಯಿಲ ಹಿಂದೂ ಕಾರ್ಯಕರ್ತರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!