ರಕ್ತಚೆಲ್ಲುವ ಸಂಸ್ಕ್ರತಿಗಿಂತ ರಕ್ತದಾನಗೈಯುವ ಸಂಸ್ಕೃತಿ ರೂಡಿಯಾಗಲಿ: ಡಾ! ರಾಜಾರಾಮ್, ಕೆ.ಬಿ: ಇಳಂತಿಲ 132, ಮಂದಿಯಿಂದ ಸ್ವಯಂ ಪ್ರೇರಿತ ರಕ್ತದಾನ

ಇಳಂತಿಲ: ಬಿಸಿ ರಕ್ತದ ಯುವ ಜನತೆ ಯಾರದೋ ಮಾತಿಗೆ ಮರುಳಾಗಿ ರಕ್ತಚೆಲ್ಲುವ ಸಂಸ್ಕೃತಿಯ ಕಡೆ ಕಾಲಿಡದೆ ರಕ್ತದಾನಗೈಯುವ ಮೂಲಕ ದೇಶ ಸೇವೆಗೆ ಮುಂದಾಗಬೇಕು. ರಕ್ತದಾನ ಜೀವದಾನಕ್ಕೆ ಸಮಾನಾಗಿದ್ದು ಬ್ರಾತೃತೃವನ್ನು ಹತ್ತಿರಗೊಳಿಸುತ್ತದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಡಾ! ರಾಜಾರಾಮ, ಕೆ.ಬಿ ಹೇಳಿದರು.

ಅವರು ಮೇ 28 ರಂದು ಉಪ್ಪಿನಂಗಡಿಯ ಎಚ್. ಎಮ್ ಆಡಿಟೋರಿಯಂ ನಲ್ಲಿ ಸೌಹಾರ್ದ ಸಮಿತಿ (ರಿ) ಇಳಂತಿಲ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಮತ್ತು ಬ್ಲಡ್ ಡೋನರ್ಸ್ (ರಿ) ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಭಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿದ್ದ ಇಳಂತಿಲ ಗ್ರಾಮ ಪಂಚಾಯತ್ ಅದ್ಯಕ್ಷೆ ಚಂದ್ರಿಕಾ ಭಟ್ ಮಾತನಾಡುತ್ತಾ ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಜನ ರಕ್ತದಾನಗೈಯಲು ಹಿಂದೆ ಮುಂದೆ ನೋಡುತ್ತಿದ್ದು ಹೀಗಿದ್ದರೂ ಇಲ್ಲಿನ ಯುವಕರು ರಕ್ತದಾನಗೈಯಲು ಮುಂದಾಗಿರುವುದ ಶ್ಲಾಘನೀಯ ಎಂದರು.

ಸೌಹಾರ್ದ ಸಮಿತಿ ಅಧ್ಯಕ್ಷ ನ್ಯಾಯವಾದಿ ಮನೋಹರ ಕುಮಾರ್ ಅದ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ SKSSF ವಿಕಾಯದ ಜಿಲ್ಲಾ ಚೇರ್ಮನ್ ಇಸ್ಮಾಯಿಲ್ ತಂಗಳ್, ಉಪ್ಪಿಂಗಡಿ ಜುಮಾ ಮಸೀದಿಯ ಅದ್ಯಕ್ಷ ಮುಸ್ತಾಫ, ಕೆಂಪಿ, ಉಪ್ಪಿನಂಗಡಿ ಚರ್ಚ್ ಉಪಾದ್ಯಕ್ಷ ನವೀನ್ ಬ್ರಾಗ್ಸ್, ಎನ್ಮಾಡಿ, ಉಪ್ಪಿನಂಗಡಿ ಸಿ.ಎ ಬ್ಯಾಂಕ್ ಅದ್ಯಕ್ಷ ಕೆ.ವಿ ಪ್ರಸಾದ್, ಜೋಗಿಬೆಟ್ಟು ಮಸೀದಿ ಅದ್ಯಕ್ಷ ಝಕಾರಿಯಾ ಅಗ್ನಾಡಿ, ಸಹಾಯ್ ಉಪ್ಪಿನಂಗಡಿ ಸೆಕ್ಷನ್ ನ ಪ್ರಮುಖ ಅಬ್ದುಲ್ ಲತೀಪ್, ಮಾಜಿ ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ಇಳಂತಿಲ ಗ್ರಾ.ಪಂ ಸದಸ್ಯರುಗಳಾದ ಯು. ಕೆ ಇಸುಬು, ವಸಂತ ಶೆಟ್ಟಿ, ತಣ್ಣೀರುಪಂಥ ಗ್ರಾ.ಪಂ ಸದಸ್ಯರುಗಳಾದ ಜಯವಿಕ್ರಂ ಕಲ್ಲಾಪು, ಆಯೂಬ್ ಡಿ.ಕೆ, ಇಳಂತಿಲ ಗ್ರಾ.ಪಂ ಮಾಜಿ ಸದಸ್ಯ ಯು.ಟಿ ಫಯಾಜ್ ಅಹಮದ್, ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಅದ್ಯಕ್ಷ ಹರಿದಾಸ್ ಎಸ್. ಎಂ, ಇಳಂತಿಲ ಕಾಂಗ್ರೆಸ್ ಸಮಿತಿ ಅದ್ಯಕ್ಷ ಜನಾರ್ಧನ ಪೂಜಾರಿ, ಸೌಹಾರ್ದ ಸಮಿತಿ ಪ್ರದಾನ ಕಾರ್ಯದರ್ಶಿ ಅಶ್ವಿರ್ ಯು.ಟಿ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಮತ್ತು ಗ್ರಾಮ ಪಂಚಾಯತ್ ಕೊರೋನಾ ಟಾಸ್ಕ್ ಪೋರ್ಸ್ ಸಮಿತಿಗೆ ಸೌಹಾರ್ದ ಸಮಿತಿ ವತಿಯಿಂದ ವಿಟಾಮಿನ್ ಸಿ ಮಾತ್ರೆ ಖರೀದಿ ಬಗ್ಗೆ ಧನ ಸಹಾಯ ನೀಡಲಾಯಿತು.

ಗ್ರಾ.ಪಂ ಸದಸ್ಯ ಯು.ಕೆ ಇಸುಬು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ವಂದಿಸಿದರು. ಬೆಳ್ತಂಗಡಿ ವಕೀಲರ ಸಂಘದ ಮಾಜಿ ಅದ್ಯಕ್ಷ ಶಿವ ಕುಮಾರ್ ಎಸ್. ಎಂ ಕಾರ್ಯಕ್ರಮ ನಿರೂಪಿಸಿದರು.

error: Content is protected !!