ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಸಿಬ್ಬಂದಿ ಸಾವು: ತೆಕ್ಕಾರು ಎಸ್ ಡಿ ಪಿ ಐ ಸಮಿತಿ ಸಂತಾಪ

ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮದಲ್ಲಿ 5 ವರ್ಷಗಳಿಂದ ಮೆಸ್ಕಾಂ ಸಿಬ್ಬಂದಿಯಾಗಿ ಸೇವೆಸಲ್ಲಿಸುತ್ತಿದ್ದ ವಿಕಾಸ್ (26) ರವರು ಕೆಲಸ ನಿರ್ವಹಿಸುತ್ತಿರುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಮೃತ ಪಟ್ಟಿರುತ್ತಾರೆ.

ಮೂಲತಃ ಭಾಗಲಕೋಟೆ ನಿವಾಸಿಯಾಗಿರುವ ಇವರು ಒಂದು ವರ್ಷದ ಹಿಂದೆ‌ ವಿವಾಹವಾಗಿದ್ದು ಪತ್ನಿ ಹಾಗೂ ಒಂದು ತಿಂಗಳ ಮಗುವನ್ನು ಅಗಲಿರುತ್ತಾರೆ.

ಗ್ರಾಮಸ್ಥರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ವಿಕಾಸ್ ರವರ ನಿಧನಕ್ಕೆ ತೆಕ್ಕಾರು ಎಸ್ ಡಿ ಪಿ ಐ ಗ್ರಾಮ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

error: Content is protected !!