ಬೆಳ್ತಂಗಡಿ, ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ವರ್ಗಾವಣೆ ಮತ್ತು ಪದೋನ್ನತಿ ಹೊಂದಿದ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಠಾಣೆಯ ವಠಾರದಲ್ಲಿ ಎ 02 ರಂದು ನಡೆಯಿತು. ಕಾರ್ಯಕ್ರಮದಲ್ಲಿ‌ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಎಂಎಂ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ‌ ಪುತ್ತೂರು ಎಎಸ್ಪಿ ಕಛೇರಿಗೆ ವರ್ಗಾವಣೆಗೊಂಡ ಹರೀಶ್ ನಾಯ್ಕ್, ಹಾಗೂ ಉಪ್ಪಿನಂಗಡಿ ಠಾಣೆಗೆ ವರ್ಗಾವಣೆ ಗೊಂಡ ಸವಿತಾ ಶೆಟ್ಟಿ ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಪದೋನ್ನತಿ ಹೊಂದಿ‌ ವರ್ಗಾವಣೆಗೊಂಡ , ಮಧು ಕೆ.ಆರ್. ಇವರನ್ನು ಠಾಣೆಯ ವತಿಯಿಂದ ಗೌರವಿಸಲಾಯಿತು. ಸರಳವಾಗಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಸಂಚಾರಿ ಠಾಣಾ ಪಿಎಸ್ಐ ಭಾರತಿ ಶೆಟ್ಟಿ , ಪಿಎಸ್ಐ ಶರತ್ ಶುಭಕೋರಿದರು.ಎಎಸ್ಐ ರಾಮಯ್ಯ ಹೆಗ್ಡೆ ಸ್ವಾಗತಿಸಿ ವೆಂಕಪ್ಪ ನಿರೂಪಿಸಿ ಧನ್ಯವಾದವಿತ್ತರು.

error: Content is protected !!