ಧರ್ಮಸ್ಥಳದಲ್ಲಿ ಬಚ್ಚಿರೆ ಜಾನಪದ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ: ಫೆ.21ರಂದು‌ ಬೆಳ್ತಂಗಡಿ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಕಾರ್ಯಕ್ರಮ

ಬೆಳ್ತಂಗಡಿ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ. ವತಿಯಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ಫೆ. 21 ರಂದು ನಡೆಯುವ ಬಚ್ಚಿರೆ ಜನಪದ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾ ಮುಖ್ಯ ಸಂಯೋಜಕ ನಿತ್ಯಾನಂದ ನಾವರ, ಸಂಯೋಜಕ ಗಂಗಾಧರ್ ರೈ ಮಾಣಿ, ವಸಂತ್ ಕುಮಾರ್ ಶೆಟ್ಟಿ, ಬಚ್ಚಿರೆ ಕಾರ್ಯಕ್ರಮದ ಸಲಹೆಗಾರರಾದ ಕೃಷ್ಣ ಆಚಾರ್ಯ ಉಜಿರೆ, ಧರಣೇಂದ್ರ ಕೆ. ಜೈನ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಸದಸ್ಯರಾದ ರಾಜೀವ ಡಿ ಗೌಡ, ರಾಮಕೃಷ್ಣ ಗೌಡ, ಸುರೇಂದ್ರ ಎಸ್., ಅಶೋಕ್ ಕುಮಾರ್ ಬಿ. ಪಿ., ಪುಷ್ಪಾವತಿ ಎನ್. ನಾವರ ಮೊದಲಾದವರು ಉಪಸ್ಥಿತರಿದ್ದರು.

error: Content is protected !!