ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವಿಜಯ ಕುಮಾರ್ ರಿಗೆ ಧರ್ಮಸ್ಥಳದಿಂದ ಗೌರವಾರ್ಪಣೆ

ಧರ್ಮಸ್ಥಳ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಶುಭಶ್ಚಂದ್ರರಾಜ್, ಪುರಂದರ ಭಟ್ ಗೌರವಿಸಿ ಅಭಿನಂದಿಸಲಾಯಿತು.
ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ, ಮೋಹನ್ ಪಡಿವಾಳ್, ನೇಮಿರಾಜ ಆರಿಗ, ಮಹಾವೀರ ಹೆಗ್ಡೆ, ಎಂ.ಕೆ. ವಿಪುಲ್ ತೇಜ್, ಪಾರ್ಶ್ವನಾಥ ವರ್ಮಾ ಮೊದಲಾದವರು ಉಪಸ್ಥಿತರಿದ್ದರು.

error: Content is protected !!