
ಬೆಳ್ತಂಗಡಿ: ಹಿಂದೂಗಳ ಪವಿತ್ರ ಆರಾಧ್ಯ ದೇವರು ಆದರ್ಶ ಪುರುಷ ಶ್ರೀರಾಮನ ಬಗ್ಗೆ ಸಾಹಿತಿ ಭಗವಾನ್ ಅವರು ಅವಹೇಳನ ರೀತಿಯಲ್ಲಿ ಮಾತನಾಡಿ ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟ್ಟು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.
ಈ ವೇಳೆ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ,ಉಪಾಧ್ಯಕ್ಷರಾದ ಗಣೇಶ್ ಲಾಯಿಲ, ಹರೀಶ್ ಗೌಡ ಸಂಬೋಳ್ಯ,ಕಾರ್ಯದರ್ಶಿಗಳಾದ ಸುದೀರ್ ಪೂಜಾರಿ ಚಾರ್ಮಾಡಿ ಹ ಜಗದೀಶ್ ಕನ್ನಾಜೆ,ಸದಸ್ಯರಾದ ಪವನ್ ಬಂಗೇರ, ನಗರ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರತ್ ಶೆಟ್ಟಿ ಮಂಜುನಾಥ.ವಿ.ರೆಂಕೆದಗುತ್ತು ಹಾಗೂ ಯೋಗೀಶ್ ಶಿಶಿಲ ಉಪಸ್ಥಿತರಿದ್ದರು.