ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಅಂತರ್ಜಲ ಸಂರಕ್ಷಣೆ, ಪುನಶ್ಚೇತನಕ್ಕೆ ಒತ್ತು ನೀಡುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ) ತಿದ್ದುಪಡಿ ಮಸೂದೆಯನ್ನು ವಿಧಾನಪರಿಷತ್ನಲ್ಲೂ ಅನುಮೋದನೆ ಪಡೆಯಲಾಯಿತು.
ತಿದ್ದುಪಡಿ ಕಾಯ್ದೆಯಂತೆ ಇನ್ನು ಮುಂದೆ ದಿನಕ್ಕೆ ನಿಗದಿತ ಪ್ರಮಾಣದಲ್ಲಿ ಮಾತ್ರವೇ ಕೊಳವೆಬಾವಿಯಿಂದ ನೀರು ಹೊರತೆಗೆಯಬೇಕಿದೆ. ಪ್ರಾಧಿಕಾರದ ಅನುಮತಿ ಪಡೆಯದೆ ಬೋರ್ವೆಲ್ ಕೊರೆಯುವಂತಿಲ್ಲ. ಖಾಸಗಿ ಟ್ಯಾಂಕರ್ಗಳ ಮಾಲೀಕರು ನೀರು ತೆಗೆಯಲು ಎನ್ಒಸಿ ಪಡೆಯುವುದು ಕಡ್ಡಾಯವಾಗಿರಲಿದೆ. ಪ್ಯಾಕೇಟ್ ಕುಡಿಯುವ ನೀರು ತಯಾರಕರಿಗೆ 1 ರಿಂದ 25 ಸಾವಿರ ಲೀಟರ್ವರೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂಬ ನಿಯಮ ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ.
ಇದಲ್ಲದೇ, ಗಣಿ- ಕೈಗಾರಿಕೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಗೆ 25 ಸಾವಿರ ಲೀಟರ್ನಿಂದ 2 ಲಕ್ಷ ಲೀಟರ್ ನೀರು ಬಳಸಿದರೆ ಪ್ರತಿ ಸಾವಿರ ಲೀಟರ್ಗೆ 1 ರೂಪಾಯಿ ಶುಲ್ಕ, ಅಪಾರ್ಟ್ಮೆಂಟ್ ಹಾಗೂ ಗ್ರೂಪ್ ಹೌಸ್ಗಳು 2 ಲಕ್ಷ ಲೀಟರ್ಗಿಂತ ಹೆಚ್ಚು ನೀರು ಹೊರ ತೆಗೆದರೆ ಸಾವಿರ ಲೀಟರ್ಗೆ 2 ರೂಪಾಯಿ ಶುಲ್ಕ ಪಾವತಿಸಬೇಕಿದೆ. ನಿಯಮ ಮೀರಿದರೆ ಗರಿಷ್ಠ 25 ಸಾವಿರ ದಂಡ ಪಾವತಿಸುವಂತೆ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ