ಆರಂಬೋಡಿ ಗ್ರಾಮದ 8 ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ:

 

 

ಬೆಳ್ತಂಗಡಿ: ಆರಂಬೋಡಿ ಗ್ರಾಮದ ಎಂಟು ಸರ್ಕಾರಿ ಶಾಲೆಗಳ ಮಕ್ಕಳಿಗೆ ಮನೋಜ್ ಶೆಟ್ಟಿ ಐತ್ತೇರಿ ಅವರು ಉಚಿತ ಪುಸ್ತಕ ವಿತರಣೆ ಮಾಡಿದರು.ಆರಂಬೋಡಿ, ಹೊಕ್ಕಾಡಿಗೋಳಿ, ಪಿಲ್ಲಂಗೋಳಿ, ಗುಂಡೂರಿ, ಹನ್ನೆರಡು ಕವಲು, ಮಂಜಕಲ್, ಕಡ್ತಲಬೆಟ್ಟು, ರಾಯಿ, ಸೇರಿದಂತೆ ಎಲ್ಲಾ ಶಾಲೆಗಳಿಗೆ ಬರೆಯುವ ಪುಸ್ತಕ ವಿತರಿಸಿದರು.‌ಈ ಸಂದರ್ಭದಲ್ಲಿ ಮನೋಜ್ ಶೆಟ್ಟಿಯವರ ತಂದೆ ಐತ್ತೇರಿ ಹರಿಯಪ್ಪ ಶೆಟ್ಟಿ,ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಸಿಬ್ಬಂದಿಗಳು, ಹಳೇ ವಿದ್ಯಾರ್ಥಿಗಳು , ಶಾಲಾ ಮಕ್ಕಳು ಉಪಸ್ಥಿತರಿದ್ದರು.

error: Content is protected !!