ಬೆಳ್ತಂಗಡಿ: ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಅನಾಹುತಗಳು ಸಂಭವಿಸಿವೆ. ಲಾಯಿಲ ಗ್ರಾಮದ ಅಂಕಾಜೆ ಎಂಬಲ್ಲಿ ರಸ್ರೆ ಬದಿಯ ಗುಡ್ಡದ ದೊಡ್ಡ ಗಾತ್ರದ ಕಲ್ಲು ಸಹಿತ ಮಣ್ಣು ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.ಬಂದಾರು ಗ್ರಾಮದ ಮುರ್ತಾಜೆ ಸೇಸಪ್ಪ ಪೂಜಾರಿ ಕೋಳಿ ಶೆಡ್ ಮೇಲೆ ಮಣ್ಣು ಕುಸಿದು ಹಾನಿಯುಂಟಾಗಿದೆ.