ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್ ಬೆಳ್ತಂಗಡಿ ವತಿಯಿಂದ ವಿ. ಕೆ. ವಿಟ್ಲರಿಗೆ ಸನ್ಮಾನ

ಬೆಳ್ತಂಗಡಿ : ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮೂರ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಇಲ್ಲಿನ ಚಿತ್ರಕಲಾ ಶಿಕ್ಷಕರಾದ ವಿಶ್ವನಾಥ ಕೆ. ವಿಟ್ಲ (ವಿ. ಕೆ. ವಿಟ್ಲ) ಇವರನ್ನು ಅ.18ರಂದು ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್ ಬೆಳ್ತಂಗಡಿ ಇದರ ವತಿಯಿಂದ ಸನ್ಮಾನಿಸಲಾಯಿತು.

ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್ ದಿನಾಚರಣೆಯ ಸಂಭ್ರಮಾಚಣೆಯ ಅಂಗವಾಗಿ ವಿಕೆ ವಿಟ್ಲ ಅವರ ಮನೆಯಲ್ಲಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಸ್ ಎನ್ ಆರ್ ಪಿಪಿಎಫ್ ವಾಲ್ಟರ್ ಸಿಕ್ವೇರಾ, ಎಸ್ ಎನ್ ಆರ್ ಪಿಪಿಎಫ್ ವಿಶ್ವನಾಥ ಶೆಟ್ಟಿ, ಸದಸ್ಯರಾದ ಎಸ್ ಎನ್ ಆರ್ ಪಿಪಿಎಫ್ ವಿಲ್ಸನ್ ಗೊನ್ಸಾಲ್ವಿಸ್, ಎಸ್ ಎನ್ ಆರ್ ದಯಾನಂದ ಕೆ, ಎಸ್ ಎನ್ ಆರ್ ಭರತ್ ಕುಮಾರ್, ಎಸ್ ಎನ್ ಆರ್ ಕಿರಣ್ ಕುಮಾರ್ ಹಾಗೂ ಎಸ್ ಎನ್ ಆರ್ ರಾಧಾಕೃಷ್ಣ.ಕೆ ಜೊತೆಗಿದ್ದರು.

ಸ್ಥಾಪಕಾಧ್ಯಕ್ಷರಾದ ಎಸ್ ಎನ್ ಆರ್ ಸಿ ಎಸ್ ಎಲ್ ಡಾಟ ಪ್ರಮೋದ್ ಆರ್ ನಾಯಕ್, ಅಂತಾರಾಷ್ಟ್ರೀಯ  ಸೀನಿಯರ್ ಛೇಂಬರ್ ದಿನಾಚರಣೆಯ ವಿಶೇಷತೆಯನ್ನು ತಿಳಿಸಿದರು.

ಸೀನಿಯರ್ ಛೇಂಬರ್ ಬೆಳ್ತಂಗಡಿ ಇದರ ಪೂರ್ವಧ್ಯಕ್ಷರಾದ ಎಸ್ ಎನ್ ಆರ್ ಪಿಪಿಎಫ್ ಲ್ಯಾನ್ಸಿ ಪಿರೇರಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಕಾರ್ಯದರ್ಶಿ ಎಸ್ ಎನ್ ಆರ್ ಪಿಪಿಎಫ್ ಜಾನ್ ಅರ್ವಿನ್ ಡಿಸೋಜ ರವರು ಧನ್ಯವಾದ ಸಮರ್ಪಿಸಿದರು.

error: Content is protected !!