ಸೈಡ್ ಕೊಡುವ ವೇಳೆ ಇನ್ನೊಂದು ಕಾರಿಗೆ ತಾಗಿದ ಕಾರು: ರಸ್ತೆಯಲ್ಲೇ ವಾಗ್ವಾದಕ್ಕಿಳಿದ ಮಹಿಳೆಯರು, ಪುರುಷರು:ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಘಟನೆ:

 

 

ಬೆಳ್ತಂಗಡಿ: ಸೈಡ್ ಕೊಡುವ ವೇಳೆ ಕಾರಿಗೆ ತಾಗಿದೆ ಎಂದು ಎರಡು ಕಾರಿನ   ಪ್ರಯಾಣಿಕರು ವಾಗ್ವಾದಕ್ಕಿಳಿದ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದಿದೆ.ಶ್ರೀ ಕ್ಷೇತ್ರ
ಧರ್ಮಸ್ಥಳಕ್ಕೆ ಆಗಮಿಸಿದ್ದ  ಯಾತ್ರಾರ್ಥಿಗಳು ಹಿಂದಿರುಗುವ ವೇಳೆ ಕಾರೊಂದಕ್ಕೆ ಸೈಡ್ ಕೊಡುವ ವೇಳೆ ತಾಗಿದೆ ಎಂಬ  ವಿಚಾರವಾಗಿ   ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಶಾಸಕರ ಕಛೇರಿ ಎದುರು ಕಾರನ್ನು ನಿಲ್ಲಿಸಿ  ವಾಗ್ವಾದಕ್ಕಿಳಿದಿದ್ದಾರೆ. ಕಾರಿನಲ್ಲಿದ್ದ ಮಹಿಳೆಯರು ಪುರುಷರು ಇತ್ತಂಡಗಳಾಗಿ ಗಲಾಟೆ ಮಾಡಿಕೊಂಡಿದ್ದು, ಸ್ವಲ್ಪ ಹೊತ್ತು ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಂತರ ಸ್ಥಳೀಯರು ಎರಡು ಕಾರಿನವರನ್ನು ಸಮಾಧಾನ ಪಡಿಸಿ ಕಳುಹಿಸಿಕೊಟ್ಟು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

error: Content is protected !!