ಕಳ್ಳಭಟ್ಟಿ ಸೇವಿಸಿ 28 ಜನರು ಸಾವು: 49 ಜನರ ಸ್ಥಿತಿ ಗಂಭೀರ..!

ಛಾಪ್ರಾ: ಕಳ್ಳಭಟ್ಟಿ ಸೇವಿಸಿ 28 ಜನರು ಸಾವನ್ನಪ್ಪಿದ ಘಟನೆ ಬಿಹರದ ಸಿವಾನ್ ಹಾಗೂ ಛಾಪ್ರಾದಲ್ಲಿ ಸಂಭವಿಸಿದೆ.

ಈವರೆಗೆ 28 ಜನರು ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಜನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿವಾನ್ ನ ಭಗವಾನ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ಜನರು ಸಾವನ್ನಪ್ಪಿದ್ದು, ಮಘರ್ ಗ್ರಾಮದಲ್ಲಿ ಮದ್ಯ ಸೇವಿಸಿದ ಜನ ವಾಂತಿ, ಭೇದಿ, ದೃಷ್ಟಿದೋಷಕ್ಕೆ ತುತ್ತಾಗಿದ್ದಾರೆ.

ಸಿವಾನ್, ಸರನ್ ಜಿಲ್ಲೆ ಸೇರಿದಂತೆ 49 ಜನರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

error: Content is protected !!