ವೈಭವದೊಂದಿಗೆ ಸಂಪನ್ನವಾದ ಮಂಗಳೂರು ದಸರಾ: ಮೆರವಣಿಗೆಯಲ್ಲಿ ಗಮನಸೆಳೆದ ಚಂದ್ಕೂರು ಕುಣಿತ ಭಜನಾ ತಂಡ

ಮಂಗಳೂರು : ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ದಸರ ಈ ಬಾರೀಯೂ ವೈಭವದಿಂದ ನಡೆದು ಸೋಮವಾರ ಸಂಪನ್ನಗೊAಡಿದೆ.

ಭಾನುವಾರ ಸಂಜೆ ಆರಂಭವಾದ ಆಕರ್ಷಕ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು, ನೃತ್ಯ ಭಜನಾ ತಂಡಗಳು ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ನೀಡಿದ್ದು ಈ ಮಧ್ಯೆ ಬೆಳ್ತಂಗಡಿ ತಾಲೂಕಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ನೃತ್ಯ ಭಜನಾ ತಂಡ ಭಾಗವಹಿಸಿ ನೃತ್ಯ ಭಜನೆಯ ಮೂಲಕ ಎಲ್ಲರ ಗಮನ ಸೆಳೆಯಿತು.

ರಸ್ತೆಯುದ್ದಕ್ಕೂ ಸಾಗಿದ ಮೆರವಣಿಗೆಯಲ್ಲಿ ವಿವಿಧ ಭಜನಾ ಹಾಡುಗಳಿಗೆ ಹೆಜ್ಜೆಹಾಕಿದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ನೃತ್ಯ ತಂಡ ಸಾವಿರಾರು ಜನರ ಮಧ್ಯೆ ಕಣ್ಸೆಳೆದಿದೆ.

error: Content is protected !!