267 ನಾಟಕ ಪ್ರದರ್ಶನ ನೀಡಿದ ಕಲಾವಿದ ನಿಧನ: 15 ದಿನಕ್ಕೂ ಮುನ್ನ ಸಿಕ್ಕಿತೆ ಸಾವಿನ ಸೂಚನೆ..?: “ಕಾಲ ಸನ್ನಿಹಿತವಾಗಿದೆ” ಸ್ನೇಹಿತರಿಗೆ ಪತ್ರ..!

ಬೆಂಗಳೂರು: ರಾಜ್ಯದ ನಾನಾ ಕಡೆ 267 ನಾಟಕಗಳ ಪ್ರದರ್ಶನ ನೀಡಿದ್ದ ಪ್ರಖ್ಯಾತ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್ ಚಂದ್ರಪ್ಪ (76) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾವಿಗೂ 15 ದಿನ ಮುನ್ನ ತಮ್ಮ ಸ್ನೇಹಿತರಿಗೆ ಬರೆದ ಪತ್ರ ಇದೀಗ ಆಶ್ಚರ್ಯ ಮೂಡಿಸಿದೆ. ಚಂದ್ರಪ್ಪ ಅವರು ಸ್ನೇಹಿತರಿಗೆ ಪತ್ರ ರವಾನಿಸಿದ್ದು ಅದರಲ್ಲಿ “ಕಾಲ ಸನ್ನಿಹಿತವಾಗಿದೆ” ಎಂದು ಬರೆದಿದ್ದರು. ಅದಾದ 15 ದಿನಗಳಿಗೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಲ್ಲದೆ, ಹಲವು ನಾಟಕಗಳನ್ನು ನಿರ್ದೇಶನ ಮಾಡಿ, ಸಂಗೀತ ಸಂಯೋಜನೆಯನ್ನೂ ಮಾಡಿದ್ದರು. ರಾಜಕೀಯಕ್ಕೂ ಕಾಲಿಟ್ಟಿದ್ದ ಚಂದ್ರಪ್ಪ ತಾಲೂಕು ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

error: Content is protected !!