ನಿಲ್ಲಿಸಿದ್ದ ಕಾರಿಗೆ ಕೆ. ಎಸ್. ಆರ್. ಟಿ. ಸಿ. ಬಸ್ ಡಿಕ್ಕಿ ಕಾರು ಜಖಂ: ಇಂದ ಬೆಟ್ಟು ಪಂಚಾಯತ್ ಬಳಿ ಘಟನೆ:

 

ಬೆಳ್ತಂಗಡಿ:ರಸ್ತೆ ಬದಿ ನಿಲ್ಲಿಸಿದ ಕಾರಿಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಘಟನೆ ಇಂದಬೆಟ್ಟು ಬಳಿ ಇಂದು ಸಂಜೆ ನಡೆದಿದೆ.
ಕಿಲ್ಲೂರು ಬೆಳ್ತಂಗಡಿ ಹೆದ್ದಾರಿಯಲ್ಲಿ ಬೆಳ್ತಂಗಡಿ ಕಡೆಗೆ  ಸಂಚರಿಸುತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಇಂದಬೆಟ್ಟು ಪಂಚಾಯತ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಅಲ್ಟೋ ಕಾರಿಗೆ ಸಂಜೆ 5.30 ರ ಸುಮಾರಿಗೆ  ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ವೇಳೆ ಕಾರಿನಲ್ಲಿ ಹಾಗೂ ಅದರ ಸುತ್ತಮುತ್ತ ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಯಾವುದೇ  ಅನಾಹುತ ಸಂಭವಿಸಿಲ್ಲ ಅದರೆ ಡಿಕ್ಕಿಯ ರಭಸಕ್ಕೆ ಕಾರು  ಜಖಂಗೊಂಡಿದೆ .‌ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

error: Content is protected !!