ಕೊಕ್ಕಡ,ಕಾರು ಹಿಂದಕ್ಕೆ ಚಲಾಯಿಸುವ ವೇಳೆ ಅವಘಡ: ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿ ವಿದ್ಯಾರ್ಥಿ ಸಾವು:

 

 

ಬೆಳ್ತಂಗಡಿ:ಮನೆಯ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃತಪಟ್ಟ ದಾರುಣ ಘಟನೆ  ಕೊಕ್ಕಡದಲ್ಲಿ ಮಂಗಳವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಹಮೀದ್ ಎಂಬವರ ಪುತ್ರ ನವಾಫ್ (10) ಮೃತಪಟ್ಟ ಬಾಲಕ. ಕಡಬ ತಾಲೂಕು ಆತೂರಿನ ಶಾಲೆಯೊಂದರಲ್ಲಿ 4ನೇ ತರಗತಿ ಓದುತ್ತಿದ್ದ. ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ವಾಹನದ ಹಿಂಬದಿ ಸಿಟೌಟ್ ಕೆಳಗೆ ನಿಂತಿದ್ದ ನವಾಫ್ ಕಾರಿನಡಿಗೆ ಬಿದ್ದಿದ್ದಾನೆ. ಕಾರು ಆತನ ಮೈಮೇಲೆ ಹರಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

error: Content is protected !!