ಬೆಳ್ತಂಗಡಿ, ಉಚಿತ ರಕ್ತ ಹಾಗೂ ಆರೋಗ್ಯ ತಪಾಸಣಾ ಶಿಬಿರ: ರೆಡ್ ಕ್ರಾಸ್ ಸಂಸ್ಥೆ, ಮಂಜುಶ್ರೀ ಸೀನಿಯರ್ ಛೇಂಬರ್,ಹಾಸ್ಪಿಟಲ್ ಸೊಸೈಟಿ ಸಹಯೋಗ:

 

 

ಬೆಳ್ತಂಗಡಿ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳ್ತಂಗಡಿ ಘಟಕ,
ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ಹಾಗೂ ದ. ಕ. ಹಾಸ್ಪಿಟಲ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೋರ್ಟ್ ರಸ್ತೆಯಲ್ಲಿರುವ “ಅನನ್ಯ” ಕಛೇರಿಯಲ್ಲಿ “ಉಚಿತ ರಕ್ತ ತಪಾಸಣೆ ಹಾಗೂ ಅರೋಗ್ಯ ತಪಾಸಣಾ ಶಿಬಿರ” ಸೆ 22 ಭಾನುವಾರ  ನಡೆಯಿತು. ಕಾರ್ಯಕ್ರಮವನ್ನು ಸೀನಿಯರ್ PPF ವಾಲ್ಟರ್ ಸಿಕ್ವೇರಾ ದೀಪ ಬೆಳಗಿಸಿ ಉದ್ಘಾಟಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶ್ರೀ ಹರಿದಾಸ್ ಎಸ್. ಎಂ ಇವರು ಪ್ರಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು.
ಕಾರ್ಯದರ್ಶಿ ಸೀನಿಯರ್
PPF ಜಾನ್ ಅರ್ವಿನ್ ಡಿಸೋಜ ಶುಭಕೋರಿದರು.
ವೇದಿಕೆಯಲ್ಲಿ ವಕೀಲರಾದ ಶ್ರೀ ಶಿವಕುಮಾರ್, ಶ್ರೀ ವೆಂಕಟೇಶ್ ಮಯ್ಯ, ಡಾI ದೀಪ್ತಿ ಹಾಗೂ ಡಾI ಅನನ್ಯ ಉಪಸ್ಥಿತರಿದ್ದರು.
ಛೇoಬರಿನ ಪೂರ್ವಧ್ಯಕ್ಷರಾದ ಸೀನಿಯರ್ PPF ಪ್ರಥ್ವಿ ರಂಜನ್ ರಾವ್, ಲ್ಯಾನ್ಸಿ ಪಿರೇರಾ, ಸದಸ್ಯರುಗಳಾದ ಸೀನಿಯರ್ PPF ಹರೀಶ್ ಶೆಟ್ಟಿ, ವಿಲ್ಸನ್ ಗೊನ್ಸಾಲ್ವಿಸ್, ದಯಾನಂದ ಹಾಗೂ ಬಾನುಪ್ರಸನ್ನ ಭಾಗವಹಿಸಿದರು.
ಶಿವಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದ ವಿತ್ತರು..
ಸುಮಾರು 200 ಮಂದಿ ಶಿಬಿರದಲ್ಲಿ ಭಾಗವಹಿಸಿದರು.

error: Content is protected !!