ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇಂದಿನಿಂದಲೇ ಪ್ರಾರಂಭ:ಶಾಸಕ ಹರೀಶ್ ಪೂಂಜ, ಸಂಸದ ಬೃಜೇಶ್ ಚೌಟ ಚಾಲನೆ: ಕಾಶಿಬೆಟ್ಟು ಸೇರಿದಂತೆ ಭಾರೀ ಸಮಸ್ಯೆ ಇರುವಲ್ಲಿ ತುರ್ತು ಕಾಮಗಾರಿ: ಮುಗೇರೋಡಿ ಕನ್ಸ್ ಸ್ಟ್ರಕ್ಸನ್ಸ್ ಕಾಮಗಾರಿ ನಿರ್ವಹಣೆ:

 

ಬೆಳ್ತಂಗಡಿ: ಕೊನೆಗೂ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಮಂಗಳೂರಿನ ಮುಗೇರೋಡಿ ಕನ್ಸ್ ಸ್ಟ್ರಕ್ಸನ್ಸ್ ನಿರ್ವಹಿಸಲಿದ್ದು . ಇಂದಿನಿಂದಲೇ ಕಾಮಗಾರಿ ಪ್ರಾರಂಭವಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ ಕಾಶಿಬೆಟ್ಟು ಬಳಿ  ಕಾಮಗಾರಿಗೆ ಇಂದು  ಅಧಿಕೃತ ಚಾಲನೆ ನೀಡಿದರು. ವಾಹನ ಸಂಚಾರ ಭಾರೀ ಸಮಸ್ಯೆ ಇರುವಂತಹ ಕಾಶಿಬೆಟ್ಟು , ಸೋಮಂತಡ್ಕ ಹಾಗೂ ಇತರ ಕಡೆಗಳಲ್ಲಿ ತುರ್ತು ಕಾಮಗಾರಿಯನ್ನು  ಮೊದಲು  ಮಾಡಲಿದ್ದಾರೆ.ಕೊನೆಗೂ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದು ಸಾರ್ವಜನಿಕರಲ್ಲಿ ಸಂತಸ ಉಂಟ್ಟು ಮಾಡಿದೆ.

error: Content is protected !!