ದರ್ಶನ್ ಹೇರ್ ಸ್ಟೈಲ್ ಗೆ ಕತ್ತರಿ: ‘ಐರಾವತ’ನ ತೂಕದಲ್ಲಿ ಇಳಿಕೆ..!: ಬಿಡುಗಡೆಗೆ ಪತ್ನಿ, ತಮ್ಮನಿಂದ ಕಾನೂನಾತ್ಮಕ ಹೋರಾಟ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‍ನಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ವಿಚಾರಣೆ, ಕೋರ್ಟ್ ಅಂತ ಓಡಾಡಿ ದರ್ಶನ್ ದೈಹಿಕವಾಗಿ ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಅವರ ಬಾಲ್ಯದ ಗೆಳೆಯ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಸಣ್ಣ ಆಗಿದ್ದು ನಿಜ ಎಂದಿರುವ ಅವರು, ‘ದರ್ಶನ್‍ಗೆ ಊಟ ಸೇರುತ್ತಿಲ್ಲ. ಹೀಗಾಗಿ ತೂಕ ಕಳೆದುಕೊಂಡಿದ್ದಾರೆ’ ಎಂದಿದ್ದಾರೆ.

‘ದರ್ಶನ್ ಕೂದಲು ಶಾರ್ಟ್ ಮಾಡಿಸಲಾಗಿದ್ದು ಅಲ್ಲಿ ಕೂದಲನ್ನು ನಿರ್ವಹಿಸೋದು ತುಂಬಾನೇ ಕಷ್ಟ’ ಎಂದು ಹೇಳಿದ್ದಾರೆ.

ಪತಿಯನ್ನು ಜೈಲಿನಿಂದ ಬಿಡಿಸಲು ಪತ್ನಿ ವಿಜಯಲಕ್ಷ್ಮೀ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದಾರೆ. ಇದರ ಜೊತೆಗೆ ದರ್ಶನ್ ಅವರ ಸಹೋದರ ದಿನಕರ ಅವರು ಕೂಡ ಅಣ್ಣನ ಬಿಡುಗಡೆಗೆ ಪ್ರಯತ್ನ ನಡೆಸುತ್ತಿದ್ದಾರೆ.

error: Content is protected !!