ತಾಯಿಯಿಂದಲೇ 3 ವರ್ಷದ ಮಗುವಿನ ಹತ್ಯೆ..!: ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ: ಹೆತ್ತ ಕಂದಮ್ಮನನ್ನು ಹತ್ಯೆಗೈಯ್ಯಲು ಇದೊಂದೇ ಕಾರಣ..

ಬೆಂಗಳೂರು : ತಾಯಿಯಿಂದಲೇ 3 ವರ್ಷದ ಮಗು ಹತ್ಯೆಯಾದ ಘಟನೆ ಜೂ.13ರಂದು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೆಂಕಟೇಶ್ ಹಾಗೂ ರಮ್ಯ ದಂಪತಿಗಳಿಗೆ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮುದ್ದಾದ ಅವಳಿ ಹೆಣ್ಣು ಮಗುವಾಗಿತ್ತು. ಇಬ್ಬರ ಮಗುವಿನ ಪೈಕಿ 3 ವರ್ಷ 10 ತಿಂಗಳ ಪ್ರೀತಿಕಾ ಎಂಬ ಮಗು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿತ್ತು. ಮತ್ತೊಂದು ಮಗು ಸಡೃಢವಾಗಿದ್ದು, ಶಾಲೆಗೆ ಹೋಗುತಿತ್ತು. ಆದರೆ ಪ್ರೀತಿಕಾ ಮಾತ್ರ ಅನಾರೋಗ್ಯದಿಂದಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಇದರಿಂದ ರಮ್ಯ ಮನ ನೊಂದಿದ್ದರು.

ಸುಬ್ರಮಣ್ಯಪುರದ ಮಂಜುನಾಥ ನಗರದಲ್ಲಿ ತಾಯಿ ಹಾಗೂ ಮಕ್ಕಳು ವಾಸವಿದ್ದು, ವೆಂಕಟೇಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ದೂರದ ನಾರ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೀತಿಕಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಆಗುತ್ತಿರಲ್ಲ. ಹೀಗಾಗಿ ಮುಂದೆ ಮಗುವಿನ ಭವಿಷ್ಯ ಹೇಗೋ ಎಂಬ ದುಃಖದಲ್ಲಿ ತಾಯಿ ರಮ್ಯ ಮನ ನೊಂದು ವೇಲಿನಿಂದ ಮಗುವಿನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಆಸ್ಪತ್ರೆಗೆ ಬಂದು ಮಗುವನ್ನ ತೋರಿಸಿ ನಾಟಕವಾಡಿದ್ದಳು.

ಈ ಸಂಬಂಧ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಬ್ರಮಣ್ಯಪುರ ಠಾಣೆ ಪೊಲೀಸರು ರಮ್ಯ ಅವರನ್ನು ಬಂಧಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

error: Content is protected !!