ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆ: ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ : ಹಿಂದುಳಿದ ವರ್ಗ ಮೋರ್ಚಾ ಪ್ರ.ಕಾರ್ಯದರ್ಶಿಯಾಗಿ ಶಶಿಧರ್ ಕಲ್ಮಂಜ:ಎಸ್.ಸಿ.ಮೋರ್ಚಾ ಸಿ.ಕೆ. ಚಂದ್ರಕಲಾ ಆಯ್ಕೆ: ಆಯ್ಕೆ:

 

 

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಹಿಂದುಳಿದ ವರ್ಗ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಕಲ್ಮಂಜ, ಎಸ್. ಸಿ.‌ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸಿ.ಕೆ. ಚಂದ್ರಕಲಾ ಆಯ್ಕೆಯಾಗಿದ್ದಾರೆ.

            

                ಶ್ರೀಮತಿ ಸಿ.ಕೆ. ಚಂದ್ರಕಲಾ

 

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಜಿಲ್ಲಾ ವಕ್ತಾರರಾಗಿ ಕೃಷ್ಣಪ್ಪ ಪೂಜಾರಿ, ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಮಹೇಶ್ ಜೋಗಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಶಶಿಧರ್ ಕಲ್ಮಂಜ, , ಮೋನಪ್ಪ ದೇವಸ್ಯ,

 

                 ಉಮೇಶ್ ಕುಲಾಲ್

 

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ಸಂದ್ಯಾ ವೆಂಕಟೇಶ್, ಶ್ರೀಮತಿ ಲಿಖಿತಾ ಆರ್ ಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಭರತ್ ರಾಜ್ ಕೃಷ್ಣಪುರ, ಉಮೇಶ್ ಕುಲಾಲ್, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಜಯರಾಮ ಕುಂಟ್ರಕಲ, ಪೂವಪ್ಪ ನಾಯ್ಕ್ ಆಲಂಗಾರು,

 

                      ಶಶಿಧರ್ ಕಲ್ಮಂಜ

 

ಎಸ್.ಸಿ.‌ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಕೋಟ್ಯಾನ್ ವಾಮಂಜೂರು, ಶ್ರೀಮತಿ ಸಿ.ಕೆ.ಚಂದ್ರಕಲಾ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ನಾಗರಾಜ ಪೂಜಾರಿ ಒಂಟಿಕಟ್ಟೆ, ರಾಧಾಕೃಷ್ಣ ಬೋರ್ಕರ್, ಆಯ್ಕೆಯಾಗಿದ್ದಾರೆ.

error: Content is protected !!