ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ : 2024ನೇ ಸಾಲಿನ ನೂತನ‌ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ, ಕಾರ್ಯದರ್ಶಿ ಗಣೇಶ್ ಶಿರ್ಲಾಲು, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಆಯ್ಕೆ:

 

 

ಬೆಳ್ತಂಗಡಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2023ನೇ ಸಾಲಿನ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ ಅಧ್ಯಕ್ಷತೆಯಲ್ಲಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಸಂಘದ ಕಛೇರಿಯಲ್ಲಿ ನಡೆಯಿತು.

    

 

ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ ಸ್ವಾಗತಿಸಿ 2023 ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ತುಕರಾಮ್ ಲೆಕ್ಕ ಪತ್ರಗಳನ್ನು ಮಂಡಿಸಿದರು.ನಂತರ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಚುನಾವಣಾಧಿಕಾರಿಗಳಾಗಿ ಹಿರಿಯ ಸದಸ್ಯ ಆರ್. ಎನ್. ಪೂವಣಿ ವಹಿಸಿಕೊಂಡು 2024 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

 

              ಚೈತ್ರೇಶ್ ಇಳಂತಿಲ, ಅಧ್ಯಕ್ಷರು

ನೂತನ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ (ಉದಯವಾಣಿ), ಕಾರ್ಯದರ್ಶಿಯಾಗಿ ಗಣೇಶ್ ಶಿರ್ಲಾಲು (ಪ್ರಜಾವಾಣಿ), ಉಪಾಧ್ಯಕ್ಷರಾಗಿ ಶಿಬಿ ಧರ್ಮಸ್ಥಳ (ವಾರ್ತಾಭಾರತಿ), ಜೊತೆ ಕಾರ್ಯದರ್ಶಿಯಾಗಿ ಮನೋಹರ್ ಬಳೆಂಜ‌ (ವಿಜಯವಾಣಿ),

 

          ಗಣೇಶ್  ಬಿ. ಶಿರ್ಲಾಲು ಕಾರ್ಯದರ್ಶಿ

ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ (ಸಂಯುಕ್ತ ಕರ್ನಾಟಕ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

           ಪುಷ್ಪರಾಜ್ ಶೆಟ್ಟಿ ಕೋಶಾಧಿಕಾರಿ

ಕೊನೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಹೃಷಿಕೇಶ್ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

 

             ಶಿಬಿ ಧರ್ಮಸ್ಥಳ ಉಪಾಧ್ಯಕ್ಷರು

ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಸಂಘದ ಮುಂದಿನ ಎಲ್ಲಾ ಕಾರ್ಯಚಟುವಟಿಕೆಗಳ ಬಗ್ಗೆ ಸಹಕಾರವನ್ನು ಕೇಳಿಕೊಂಡರು.

 

       ಮನೋಹರ್ ಬಳೆಂಜ ಜೊತೆ ಕಾರ್ಯದರ್ಶಿ

ಜತೆ ಕಾರ್ಯದರ್ಶಿ ಮನೋಹರ್ ಬಳೆಂಜ ಧನ್ಯವಾದವಿತ್ತರು.

error: Content is protected !!