ಬೆಳ್ತಂಗಡಿ: ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭ

ಬೆಳ್ತಂಗಡಿ: ತಾಲೂಕಿನಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಇದೀಗ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸ್ಥಾಪನೆಗೂ ಕಾಮಗಾರಿ ಆರಂಭವಾಗಿದೆ.

ಅ.27ರಂದು ಕಾಮಗಾರಿ ಆರಂಭವಾಗಿದ್ದು, ಮುಂದೆ ಸುಸಜ್ಜಿತ ಮತ್ತು ಸುಂದರ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸದ್ಯ ವಿವಿಧ ಜಿಲ್ಲೆಗಳಿಂದ ಬರುವ ಸರಕಾರಿ ಬಸ್ ಗಳಿಗೆ ಹಾಗೂ ಗ್ರಾಮೀಣ ಭಾಗದ ಖಾಸಗಿ ಬಸ್ ಗಳಿಗೆ ಸರಿಯಾದ ನಿಲ್ದಾಣವಿಲ್ಲದೆ, ಅಡ್ಡದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಕೆಲವೊಮ್ಮೆ ಬಸ್ ಸ್ಟ್ಯಾಂಡ್ ಒಳಗೆ ಬಸ್ ಗಳು ಜಾಮ್ ಆಗಿ, ಒಂದಕ್ಕೊಂದು ತಾಗಿಕೊಳ್ಳುವ ಘಟನೆಗಳು ನಡೆದಿದೆ.

ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಯಾತ್ರಾ ಸ್ಥಳ ಧರ್ಮಸ್ಥಳ ಸೇರಿದಂತೆ ಕನ್ಯಾಡಿ ಶ್ರೀ ರಾಮ ಕ್ಷೇತ್ರ, ಸೌತಡ್ಕ ಮಹಾಗಣಪತಿ ದೇವಾಲಯ, ಸುರ್ಯ ಸದಾಶಿವ ರುದ್ರ ಇನ್ನಿತರ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು, ಶೈಕ್ಷಣಿಕ ಸಂಸ್ಥೆಗಳು, ಪ್ರವಾಸಿ ತಾಣಗಳನ್ನು ಬೆಳ್ತಂಗಡಿ ತಾಲೂಕು ಹೊಂದಿದ್ದು, ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಜನರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

error: Content is protected !!