ನವ ದಂಪತಿಗಳಿಂದ ಮಾದರಿ ಕಾರ್ಯ: ಗೋಶಾಲೆಗೆ 1.50 ಲಕ್ಷ ರೂ ಸಹಾಯಧನ ಹಸ್ತಾಂತರ

ಬೆಳ್ತಂಗಡಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವದಂಪತಿಗಳು ನಂದಗೋಕುಲ ಗೋಶಾಲೆಯಲ್ಲಿ ಗೋಪೂಜೆ ಮಾಡಿ ಧನಸಹಾಯ ನೀಡಿದ್ದಾರೆ.

ಆ.28ರಂದು ವಿವಾಹವಾದ ನಂದಗೋಕುಲ ಟ್ರಸ್ಟಿನ ಟ್ರಸ್ಟಿಗಳಾದ ನವೀನ್ ಮತ್ತು ಹರಿಣಾಕ್ಷಿಯವರು ತಮ್ಮ ವಿವಾಹ ದಿನದಂದು ಸಂಗ್ರಹವಾದ 1,47,107 ರೂ ಗೋನಿಧಿಯನ್ನು ಟ್ರಸ್ಟ್ ಗೆ ಹಸ್ತಾಂತರಿಸಿ ಗೋಪಾಲಕ ಬಂಧುಗಳಿಗೆ ವಸ್ತ್ರದಾನ ಮಾಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷರಾದ ಡಾ. ಎಂ ಎಂ ದಯಾಕರ್, ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಕುಮಾರ ಅಗರ್ತ ಟ್ರಸ್ಟಿಗಳಾದ ರಮೇಶ್ ಪ್ರಭು ಮತ್ತು ಗೋಶಾಲ ಸಿಬ್ಬಂದಿಗಳು ಮತ್ತು ವಿ ಹರೀಶ್ ನೆರಿಯಾರವರು ಉಪಸ್ಥಿತರಿದ್ದು ದಂಪತಿಗಳಿಗೆ ಶುಭ ಹಾರೈಸಿದರು.

error: Content is protected !!