ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹೆಗಲಿಗೆ: ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ :ರಾಜ್ಯ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ

ಬೆಂಗಳೂರು: ಸಿದ್ದರಾಮ್ಯಯ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡುರಾವ್‌ರವರನ್ನು ನೇಮಕ ಮಾಡಲಾಗಿದೆ.


ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ, ಡಿಕೆ ಶಿವಕುಮಾರ್, ತುಮಕೂರು- ಡಾ. ಜಿ ಪರಮೇಶ್ವರ್, ಗದಗ- ಹೆಚ್.ಕೆ ಪಾಟೀಲ್, ಬೆಂಗಳೂರು ಗ್ರಾ.- ಕೆ.ಹೆಚ್ ಮುನಿಯಪ್ಪ, ರಾಮನಗರ- ರಾಮಲಿಂಗಾರೆಡ್ಡಿ, ಚಿಕ್ಕಮಗಳೂರು- ಕೆಜೆ ಜಾರ್ಜ್, ವಿಜಯಪುರ- ಎಂ.ಬಿ ಪಾಟೀಲ್, ಮೈಸೂರು- ಹೆಚ್.ಸಿ ಮಹದೇವಪ್ಪ, ಬೆಳಗಾವಿ- ಸತೀಶ್ ಜಾರಕಿಹೊಳಿ, ಕಲಬುರ್ಗಿ- ಪ್ರಿಯಾಂಕಾ ಖರ್ಗೆ, ಹಾವೇರಿ- ಶಿವಾನಂದ ಪಾಟೀಲ್, ವಿಜಯನಗರ- ಜಮೀರ್ ಅಹ್ಮದ್ ಖಾನ್, ಯಾದಗಿರಿ- ಶರಬಸಪ್ಪ ದರ್ಶನಾಪುರ್, ಬೀದರ್- ಈಶ್ವರ್ ಖಂಡ್ರೆ, ಮಂಡ್ಯ- ಚೆಲುವರಾಯಸ್ವಾಮಿ, ದಾವಣಗೆರೆ- ಎಸ್.ಎಸ್ ಮಲ್ಲಿಕಾರ್ಜುನ್, ಧಾರವಾಡ- ಸಂತೋಷ್ ಲಾಡ್, ರಾಯಚೂರು- ಶರಣಪ್ರಕಾಶ್ ಪಾಟೀಲ್, ಬಾಗಲಕೋಟೆ- ಆರ್.ಬಿ ತಿಮ್ಮಾಪುರ್, ಚಾಮರಾಜನಗರ- ಕೆ.ವೆಂಕಟೇಶ್, ಕೊಪ್ಪಳ- ಶಿವರಾಜ್ ತಂಗಡಗಿ

ಚಿತ್ರದುರ್ಗ- ಡಿ.ಸುಧಾಕರ್, ಬಳ್ಳಾರಿ- ಬಿ. ನಾಗೇಂದ್ರ, ಹಾಸನ- ಕೆ.ಎನ್ ರಾಜಣ್ಣ, ಕೋಲಾರ- ಬೈರತಿ ಸುರೇಶ್, ಉತ್ತರ ಕನ್ನಡ- ಮಂಕಾಳ ವೈದ್ಯ, ಶಿವಮೊಗ್ಗ- ಮಧು ಬಂಗಾರಪ್ಪ, ಚಿಕ್ಕಬಳ್ಳಾಪುರ- ಡಾ. ಎಂ ಸಿ ಸುಧಾಕರ್, ಕೊಡಗು- ಎನ್.ಎಸ್ ಬೋಸರಾಜು ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ.

error: Content is protected !!