ಬಿಜೆಪಿಯಿಂದ ಬಿರುಸಿನ ಚುನಾವಣಾ ಪ್ರಚಾರ:ಏ. 22 ರಂದು ನಾರಾವಿ ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಹರೀಶ್ ಪೂಂಜ ಮತಯಾಚನೆ

ಬೆಳ್ತಂಗಡಿ: ಚುನಾವಣಾ ಪ್ರಚಾರದ ಅಂಗವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಹರೀಶ್ ಪೂಂಜ ಅವರು ಎಪ್ರಿಲ್ 22 ರಂದು ನಾರಾವಿ ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಪ್ರಚಾರವನ್ನು ಕೈಗೊಳ್ಳಲಿದ್ದಾರೆ.

ಎಪ್ರಿಲ್ 22 ರಂದು ಬೆಳಿಗ್ಗೆ 7 ಗಂಟೆಗೆ ವೇಣೂರು, 8 ಗಂಟೆಗೆ ಬಜಿರೆ, 9 ಗಂಟೆಗೆ ಗುಂಡೂರಿ, 10 ಗಂಟೆಗೆ ಆರಂಬೋಡಿ, 11 ಗಂಟೆಗೆ ಹೊಸಂಗಡಿ, ಮಧ್ಯಾಹ್ನ 12 ಗಂಟೆಗೆ ಬಡಕೋಡಿ,1 ಗಂಟೆಗೆ ಕಾಶಿಪಟ್ಣ, 3 ಗಂಟೆಗೆ ಪೇರಾಡಿ, 4 ಗಂಟೆಗೆ ನಾರಾವಿ, 5 ಗಂಟೆಗೆ ಕುತ್ಲೂರು, 6 ಗಂಟೆಗೆ ಕೊಕ್ರಾಡಿ, 7 ಗಂಟೆಗೆ ಸಾವ್ಯ, 8 ಗಂಟೆಗೆ ಅಂಡಿಂಜೆಗೆ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಗಣೇಶ್ ಗೌಡ ಉಪಸ್ಥಿತಲಿರಲಿದ್ದಾರೆ.

error: Content is protected !!