ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ:10 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ…

ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ಕೇವಲ 19 ದಿನ ಮಾತ್ರ ಬಾಕಿ ಉಳಿದಿದೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು 10 ಅಭ್ಯರ್ಥಿಗಳ ನಾಮಪತ್ರವೂ ಅಂಗೀಕಾರವಾಗಿದೆ.

ಭಾರತೀಯ ಜನತಾ ಪಾರ್ಟಿಯಿಂದ ಹರೀಶ್ ಪೂಂಜಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ರಕ್ಷಿತ್ ಶಿವರಾಂ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಅಶ್ರಫ್ ಆಲಿ ಕುಂಞ, ಎಸ್.ಡಿ.ಪಿ.ಐನಿಂದ ಅಕ್ಬರ್ ಹಾಗೂ ನವಾಜ್ ಶರೀಪ್, ಸರ್ವೋದಯ ಕರ್ನಾಟಕ ಪಾರ್ಟಿಯಿಂದ ಆದಿತ್ಯ ನಾರಾಯಣ ಕೊಲ್ಲಾಜೆ, ತುಳುವೆರೆ ಪಕ್ಷದಿಂದ ಶೈಲೇಶ್ ಆರ್ ಜೆ, ಆಮ್ ಆದ್ಮ ಪಾರ್ಟಿಯಿಂದ ಜನಾರ್ಧನ, ಪಕ್ಷೇತರರಾಗಿ ಮಹೇಶ್ ಹಾಗೂ ಕೆ ಸುಬ್ರಮಣ್ಯ ಭಟ್ ಕಣಕ್ಕಿಳಿದಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳ ನಾಮಪತ್ರವನ್ನು ಅಧಿಕಾರಿಗಳು ಅಂಗೀಕರಿಸಿದ್ದಾರೆ.

error: Content is protected !!