ಸುರತ್ಕಲ್‌ನಲ್ಲಿ ಜಲೀಲ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಸುರತ್ಕಲ್ ಪೊಲೀಸ್ ವಶಕ್ಕೆ..?: ಪಿಂಕಿ ನವಾಜ್ ಕೊಲೆ ಯತ್ನ ಪ್ರಕರಣದ ಆರೋಪಿಗಳು ಖಾಕಿ ಬಲೆಗೆ..?

 

 

 

ಮಂಗಳೂರು:  ಫ್ಯಾನ್ಸಿ ಅಂಗಡಿ ಮಾಲೀಕನಿಗೆ ಚೂರಿ ಇರಿದು ದುಷ್ಕರ್ಮಿಗಳ ತಂಡ ಪರಾರಿಯಾಗಿರುವ ಘಟನೆ ಡಿ.24 ರಂದು ಸಂಜೆ ಸುರತ್ಕಲ್‌ನಲ್ಲಿ ನಡೆದಿತ್ತು. ಚಿಕಿತ್ಸೆ ಫಲಿಸದೆ ಜಲೀಲ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಮಂಗಳೂರು ಕೃಷ್ಣಪುರ ನಾಲ್ಕನೇ ಬ್ಲಾಕ್ ನಿವಾಸಿ ಜನರಲ್ ಸ್ಟೋರ್  ಅಂಗಡಿ ಮಾಲೀಕ ಜಲೀಲ್ ಗೆ    ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ  ಎದೆಭಾಗಕ್ಕೆ ಇರಿದಿದ್ದರು.  ಗಂಭೀರ ಗಾಯಗೊಂಡಿದ್ದ ಜಲೀಲ್ ಅವರನ್ನು  ಸ್ಥಳೀಯರು ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಲ್ಲಿ ಅವರು  ಸಾವನ್ನಪ್ಪಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ತನಿಖೆ ಆರಂಭಿಸಿದ ಸುರತ್ಕಲ್ ಪೊಲೀಸರು ಸುರತ್ಕಲ್ ರೌಡಿಶೀಟರ್ ಪಿಂಕಿ ನವಾಜ್ ಕೊಲೆ ಯತ್ನ ಪ್ರಕರಣದ ಆರೋಪಿಗಳಲ್ಲಿ ಇಬ್ಬರಾದ ಶೈಲೇಶ್ ಪೂಜಾರಿ ಯಾನೆ ಶೈಲು(21) ಮತ್ತು ಸುವಿನ್ ಕಾಂಚನ್ ಅಲಿಯಾಸ್ ಮುನ್ನ(25)  ಹಾಗೂ ಬೈಕಿನಲ್ಲಿ ಡ್ರಾಪ್ ಕೊಟ್ಟ  ಪಚ್ಚು ಯಾನೆ ಪವನ್    ಸೇರಿ ಮೂರು ಮಂದಿಯನ್ನು‌ ವಶಕ್ಕೆ‌ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ಜಲೀಲ್ ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿರುವ ಆರೋಪಗಳೂ ಕೇಳಿ ಬಂದಿದ್ದು,ಈ ಕಾರಣಕ್ಕಾಗಿ  ಕೊಲೆ ನಡೆದಿರಬಹುದು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಈ ಕುರಿತೂ ವಿಚಾರಣೆ ಮುಂದುವರಿದಿದೆ.

error: Content is protected !!