ಡಿ. 27ರಂದು ಪಿಲಿಪಂಜರ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ..!: ಅಗೋಚರ ಶಕ್ತಿಯ ಮೂಲ ಹುಡುಕ ಹೊರಟ ಗ್ರಾಮಸ್ಥರು..!

ಬೆಳ್ತಂಗಡಿ : ಲಾಯಿಲ ಗ್ರಾಮದ ಪಿಲಿಪಂಜರದಲ್ಲಿ 900 ವರ್ಷಗಳ ಹಿಂದೆ ಪ್ರಸಿದ್ಧಿಯಾಗಿದ್ದ ಆಗ್ರಾಹ್ಯ ಶಕ್ತಿ ಮತ್ತೆ ಗೋಚರವಾಗಿದ್ದು ಈ ಕುರಿತು ಡಿ.27ರಂದು ಪ್ರಶ್ನಾಚಿಂತನೆ ನಡೆಯಲಿದೆ. ಸುಬ್ರಹ್ಮಣ್ಯ ಭಟ್ ಕಡೇಶಿವಾಲಯ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಗೆ ಪಿಲಿಪಂಜರ ಪ್ರದೇಶದಲ್ಲಿ ಪ್ರಶ್ನಾಚಿಂತನೆ ನಡೆಯಲಿದೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಪ್ರಜಾಪ್ರಕಾಶ ನ್ಯೂಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಪ್ರಶ್ನಾಚಿಂತನೆಯ ನೇರ ಪ್ರಸಾರ ಪ್ರಸ್ತುತವಾಗಲಿದೆ.

error: Content is protected !!