ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು ಮಗನ ಕೊಲೆ ಎಂದು ಮೃತನ ತಾಯಿಯಿಂದ ದೂರು. ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದ ಘಟನೆ.

 

 

 

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ  ಕನ್ಯಾಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆಗೈದ ಪರಿಣಾಮ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಬಗ್ಗೆ ಮೃತನ ತಾಯಿ ಮಗನನ್ನು ಕೊಲೆ ಮಾಡಲಾಗಿದೆ ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

ವಿವರ
ಧರ್ಮಸ್ಥಳ ಸಮೀಪದ ಕನ್ಯಾಡಿ ಎಂಬಲ್ಲಿ ಫೆ 23 ರಂದು ಮಧ್ಯಾಹ್ನ 11 ಗಂಟೆ ಸುಮಾರಿಗೆ ದಿನೇಶ್ ಎಂಬವರಿಗೆ ಕನ್ಯಾಡಿಯಲ್ಲಿ ಅಂಗಡಿ ಹೊಂದಿರುವ ಕಿಟ್ಟ ಯಾನೆ ಕೃಷ್ಣ ಎಂಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆಗೈದಿರುತ್ತಾನೆ ಈ ಬಗ್ಗೆ ಹಲ್ಲೆಗೊಳಗಾದ ದಿನೇಶ್ ಮನೆಗೆ ಹೋಗಿ ತನ್ನ ತಾಯಿ ಹಾಗೂ ಹೆಂಡತಿಯಲ್ಲಿ ನನಗೆ ಕೃಷ್ಣ ಹೊಟ್ಟೆಗೆ ಹೊಡೆದಿದ್ದಾನೆ ವಿಪರೀತ ಹೊಟ್ಟೆ ನೋವಾಗುತ್ತಿದೆ  ಎಂದಿದ್ದಾನೆ ಫೆ 24 ಬೆಳಿಗ್ಗೆ ನೋವು ಹೆಚ್ಚಾದ ಕಾರಣ  ಕೃಷ್ಣನ ಬಳಿ ಹೋದ ಮೃತನ ತಾಯಿ ನನ್ನ ಮಗನಿಗೆ ಹೊಡೆದಿದ್ದಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು  ಹೇಳಿದಾಗ ಅವನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾನೆ ಅದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನೇಶ್ ಫೆ 25 ರಂದು ಮೃತ ಪಟ್ಟಿದ್ದಾನೆ ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮೃತನ ತಾಯಿ ಮಗನಿಗೆ ಕಿಟ್ಟ ಯಾನೆ ಕೃಷ್ಣ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದರಿಂದ ಅವನು ಸಾವನ್ನಪ್ಪಿದ್ದಾನೆ ಅದ್ದರಿಂದ ಇದು ಕೊಲೆ ಎಂದು ದೂರು ನೀಡಿದ್ದಾರೆ.

error: Content is protected !!