ಲಾಯಿಲ ಬಳಿ ಬೆಂಕಿ ಅನಾಹುತ: ಸ್ಥಳೀಯ ರಬ್ಬರ್ ತೋಟಕ್ಕೆ ವ್ಯಾಪಿಸಿದ ಅಗ್ನಿ

 

 

 

ಬೆಳ್ತಂಗಡಿ: ಲಾಯಿಲ ಬಳಿಯ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದ ರಸ್ತೆಯ ಪಕ್ಕದಲ್ಲಿ ಬೆಂಕಿ ಅನಾಹುತ ಸಂಭವಿಸಿ ರಸ್ತೆಯ ಸುತ್ತಮುತ್ತ ಹಾಗೂ ಸಮೀಪದ ರಬ್ಬರ್ ತೋಟಕ್ಕೂ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ.

 

ಸ್ಥಳೀಯರು ಈ ಬಗ್ಗೆ ಪಂಚಾಯತ್ ನ ಗಮನಕ್ಕೆ ತಂದಾಗ ತಕ್ಷಣ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದು ಅಗ್ನಿ ಶಾಮಕ ದಳದವರು ಬಂದ್ದು ಬೆಂಕಿ ನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು , ಮೆಸ್ಕಾಂ ಸಿಬಂದಿಗಳು  ಸ್ಥಳೀಯರು ಬೆಂಕಿ ಹರಡದಂತೆ ಎಚ್ಚರಿಕೆ ವಹಿಸಿದರು. ಒಂದು ವೇಳೆ ಬೆಂಕಿ ಕಾಣಿಸಿಕೊಂಡ ಪಕ್ಕದಲ್ಲೇ ಮನೆಯೊಂದಿದ್ದು ಬೆಂಕಿ ಹರಡಲಾರಂಬಿಸಿದರೆ ಅನಾಹುತ ಸಂಭವಿಸುತಿತ್ತು ಸ್ಥಳೀಯರ ಹಾಗೂ ಗ್ರಾಮ ಪಂಚಾಯತ್ ಹಾಗೂ ಅಗ್ನಿ ಶಾಮಕ ಇಲಾಖೆಯ ಸಕಾಲಿಕ ಸ್ಪಂದನೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

error: Content is protected !!