ತಾಲೂಕಿನ ಸಾಧಕರು, ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಪತ್ರಕರ್ತ ಬಿ.ಎಸ್. ಕುಲಾಲ್, ಸಾಹಿತಿ ಪ.ರಾ.ಶಾಸ್ತ್ರಿ, ಕ್ರೀಡೆಯಲ್ಲಿ ರವಿಕುಮಾರ್, ಸಮಾಜ ಸೇವೆಯಲ್ಲಿ ವಿವೇಕ್ ವಿನ್ಸೆಂಟ್ ಪಾಯಿಸ್, ಉಜಿರೆ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಗೆ ನ. 1ರಂದು ಪುರಸ್ಕಾರ

 

ಪತ್ರಕರ್ತ. ಬಿ ಎಸ್ ಕುಲಾಲ್

 

 

 

ಸಾಹಿತಿ ಪ.ರಾ ಶಾಸ್ತ್ರೀ 

 

 

 

 

ರವಿ ಕುಮಾರ್ ಅಳದಂಗಡಿ

 

ವಿವೇಕ್ ವಿನ್ಸೆಂಟ್ ಪಾಯ್ಸ್ 

 

 

 

 

ಬೆಳ್ತಂಗಡಿ: 2021-22 ನೇ ಸಾಲಿನ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ನಾಲ್ವರು ಸಾಧಕರು ಹಾಗೂ ಒಂದು ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ‌.
ಜಿಲ್ಲೆಯಲ್ಲಿ ಒಟ್ಟು 58 ಜನರಿಗೆ ಜಿಲ್ಲಾಡಳಿತ ಪ್ರಶಸ್ತಿ ಘೋಷಿಸಿದ್ದು, ಸಮಾಜಸೇವೆ, ವೈದ್ಯಕೀಯ ವಲಯ, ಶಿಕ್ಷಣ, ಸಾಹಿತ್ಯ, ರಂಗಭೂಮಿ, ಕ್ರೀಡೆ, ಪತ್ರಿಕೋದ್ಯಮ, ಕೃಷಿ, ನೃತ್ಯ, ಕಲಾ ಕ್ಷೇತ್ರ, ಯಕ್ಷಗಾನ ಮೊದಲಾದ ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗಿದೆ.
ಪತ್ರಿಕೋದ್ಯಮದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಬಿ.ಎಸ್ ಕುಲಾಲ್, ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿ ಪ.ರಾ.ಶಾಸ್ತ್ರಿ, ಕ್ರೀಡೆ – ಕಂಬಳ ಕ್ಷೇತ್ರದಲ್ಲಿ ಅಳದಂಗಡಿ ರವಿಕುಮಾರ್, ಸಮಾಜ ಸೇವೆಯಲ್ಲಿ ಜನ ಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಹಾಗೂ ಸಂಘ ಸಂಸ್ಥೆಗಳಲ್ಲಿ ಉಜಿರೆ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಆಯ್ಕೆಯಾಗಿದೆ.

error: Content is protected !!