ನಾಳ ದೇವಸ್ಥಾನಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭೇಟಿ

ಬೆಳ್ತಂಗಡಿ: ನಾಳ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರಕ್ಕೆ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕೊಪ್ಪಳದ ಅಂಜನಾದ್ರಿ ದೇವಳದ ಆಡಳ್ತೆದಾರ, ಕೊಪ್ಪಳದ ಭಜರಂಗ ದಳ ಪ್ರಮುಖ್ ಸಂತೋಷ್ ಕೆಲೋಜಿ ಜುಲೈ 30 ರಂದು
ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.‌  ದೇವಳದ ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ಅವರು ದೇವರಿಗೆ ಪೂಜೆ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸದಸ್ಯರಾದ ಜನಾರ್ಧನ ಪೂಜಾರಿ, ಅಂಬಾ ಆಳ್ವ, ಮೈಸೂರಿನ ಉದ್ಯಮಿ ಹೇಮಂತ್ ಕುಮಾರ್ ಗೇರುಕಟ್ಟೆ, ದೇವಳದ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ಅಶೋಕ ಆಚಾರ್ಯ, ಜಗನ್ನಾಥ ವಂಜಾರೆ, ಉಮಾನಾಥ ಶೆಟ್ಟಿ, ಸೋಮಪ್ಪ ಗೌಡ, ಸತೀಶ್ ಭಂಡಾರಿ, ದೇವಳದ ಕಚೇರಿ ಪ್ರಬಂಧಕ ಗಿರೀಶ್ ಶೆಟ್ಟಿ , ಬಿಜೆಪಿ ಮಂಡಲ ಯುವಮೋರ್ಚಾ ಪ್ರ.ಕಾರ್ಯದರ್ಶಿ ಉಮೇಶ್ ಕುಲಾಲ್, ಲಾಯಿಲ ಗ್ರಾ.ಪಂ.‌ಉಪಾಧ್ಗಕ್ಷ ಗಣೇಶ್ ಲಾಯಿಲ, ಪ್ರಮುಖರಾದ ಪ್ರಕಾಶ್ ಕನ್ನಾಜೆ, ಜಗದೀಶ್ ಕನ್ನಾಜೆ
ಮೊದಲಾದವರು ಇದ್ದರು.

error: Content is protected !!