ಲಾಯಿಲ: ವಾರ್ಡ್ ನಿವಾಸಿಗಳಿಂದ ಶ್ರಮದಾನ, ಸ್ವಚ್ಛತಾ ಕಾರ್ಯ:

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನ ಕೆಲವು ಕಡೆಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿದ್ದ ಹುಲ್ಲು ಹಾಗೂ ಗಿಡಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಯಿತು.

ದರ್ಪಿಂಜ ಸೇತುವೆ ಬಳಿಯಿಂದ ಪಡ್ಲಾಡಿ ಶಾಲೆಯ ಬಳಿ ತನಕ ಹಾಗೂ ಪಡ್ಲಾಡಿ ಅಂಗನವಾಡಿ ಶುದ್ಧ ನೀರಿನ ಘಟಕದ ಸುತ್ತಮುತ್ತ ಹಾಗೂ ಎಣಿಂಜೆ ಬೈಲು ಪರಿಸರದಲ್ಲಿ ಶ್ರಮದಾನ ನಡೆಯಿತು.

ಮಧ್ಯಾಹ್ನದ ಊಟ,ಚಹಾ ತಿಂಡಿ, ಹಾಗೂ ಪಾನೀಯ ವ್ಯವಸ್ಥೆ ಮಾಡಿದವರಿಗೆ  ಶ್ರಮದಾನದಲ್ಲಿ ಸಹಕರಿಸಿದ ದಾನಿಗಳು ಹಾಗೂ ಪಾಲ್ಗೊಂಡ ವಾರ್ಡ್ ನಿವಾಸಿಗಳಿಗೆ ಪ್ರಸಾದ್ ಶೆಟ್ಟಿ ಎಣಿಂಜೆ ವಂದಿಸಿದರು.

error: Content is protected !!