ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ

ದೆಹಲಿ: ಕೊರೊನಾ ಸೋಂಕು ಕಳೆದ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ‌ , ಅದರ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿರುವ ಕೇಂದ್ರ ಸರ್ಕಾರ ಇದೀಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆಯಿಂದ ಈ ಗೈಡ್​ಲೈನ್ಸ್​​​​ ಬಿಡುಗಡೆ ಆಗಿದ್ದು, ಅರೆ ನಗರ, ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್​ ನಿರ್ವಹಣೆಗೆ ಈ ಮಾರ್ಗಸೂಚಿ ಪಾಲಿಸುವಂತೆ ತಿಳಿಸಲಾಗಿದೆ. Centre issues guidelines ಕೇಂದ್ರ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಪ್ರಮುಖವಾಗಿ ಕೋವಿಡ್ ಗುಣಲಕ್ಷಣ ಕಂಡು ಬಂದ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅಲ್ಲಿನ ಆಶಾ ಕಾರ್ಯಕರ್ತೆಯರು ಟೆಸ್ಟ್​​​ ಮಾಡಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗಳಿಗೆ ಹೋಗಿ ಸರ್ವೆ ಮಾಡಬೇಕಿದೆ.

ಪ್ರಮುಖ ಮಾರ್ಗಸೂಚಿಗಳು ಇಂತಿವೆ..

  • ಕೋವಿಡ್​​ ಗುಣಲಕ್ಷಣ/ತೀವ್ರ ಉಸಿರಾಟದ ತೊಂದರೆ ಕಂಡು ಬಂದರೆ ತಕ್ಷಣವೇ ಪರೀಕ್ಷೆ.
  • ಸಮುದಾಯ ಆರೋಗ್ಯಾಧಿಕಾರಿಯಿಂದ ಕೋವಿಡ್​ ಚಿಕಿತ್ಸೆ ಬಗ್ಗೆ ಮಾಹಿತಿ (ಟೆಲಿ ಕನ್ಸಲ್ವೇಷನ್​) ರಾಪಿಡ್​ ಆ್ಯಂಟಿಜೆನ್​​ ಪರೀಕ್ಷೆ ನಡೆಸಲು ಅಲ್ಲಿನ ನರ್ಸ್​ಗಳಿಗೆ ಕೋವಿಡ್​ ಟೆಸ್ಟ್​ ತರಬೇತಿ.
  • ಕೋವಿಡ್​ ಸೋಂಕಿತರಿಗೆ ಚಿಕಿತ್ಸೆ ಅವಶ್ಯಕತೆ ಇಲ್ಲದಿದ್ದರೆ ಮನೆಯಲ್ಲೇ ಹೋಂ ಐಸೋಲೇಷನ್​ಗೆ ಸೂಚನೆ.
  • ಕೋವಿಡ್ ಪರೀಕ್ಷೆ ಬರುವುದಕ್ಕಿಂತಲೂ ಮುಂಚಿತವಾಗಿ ಕ್ವಾರಂಟೈನ್​ ಆಗಲು ಸೂಚನೆ.
  • ಸಮುದಾಯ ಕೇಂದ್ರಗಳಲ್ಲಿ ರ್ಯಾಪಿಡ್​ ಆ್ಯಂಟಿಜೆನ್ ಟೆಸ್ಟ್​ ನಡೆಸಲು ಎಲ್ಲ ರೀತಿಯ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು.
  • ಪ್ಯಾರಸಿಟಮಾಲ್​ 500 ಮಿ.ಗ್ರಾಂ ಸೇರಿದಂತೆ ಅಗತ್ಯ ಔಷಧಿ ಒಳಗೊಂಡು ಪ್ರತ್ಯೇಕ ಕಿಟ್​​ (ಕೋವಿಡ್​ ಸೋಂಕಿರುವ ಮನೆಗಳಿಗೆ) ಹೋಂ ಐಸೋಲೇಷನ್​​ನಲ್ಲಿರುವವರಿಗೆ ಕೋವಿಡ್​ ಮೆಡಿಕಲ್ ಕಿಟ್​ ನೀಡಲು ಸೂಚನೆ.
  • ಪಲ್ಸ್ ರೇಟ್​​ 94ಕ್ಕಿಂತಲೂ ಕಡಿಮೆ ಇದ್ದರೆ ತಕ್ಷಣವೇ ಚಿಕಿತ್ಸೆ, ಜಿಲ್ಲಾ ಕೇಂದ್ರಗಳಿಗೆ ಕಳುಹಿಸಲು ನಿರ್ಧಾರ.

ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳ ಒಟ್ಟು ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡಿಕೊಂಡಿರುವ ಕಾರಣ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕೋವಿಡ್ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಂಟೈನ್​ಮೆಂಟ್​ ಝೋನ್​​ ನಿರ್ಮಾಣ, ಜತೆಗೆ ಮನೆ-ಮನೆಗೆ ತೆರಳಿ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು.

error: Content is protected !!