ರಕ್ತದಾನ ಶ್ರೇಷ್ಠ ದಾನ: ಡಾ.‌ಮುರಳಿಕೃಷ್ಣ ಇರ್ವತ್ತಾಯ

ಬೆಳ್ತಂಗಡಿ: ರಕ್ತ ದಾನ ಶ್ರೇಷ್ಠ ದಾನ ಪ್ರತಿ ಆರೋಗ್ಯ ವಂತ ವ್ಯಕ್ತಿ ರಕ್ತ ದಾನ ಮಾಡಿ ತನ್ಮೂಲಕ ಸಮಾಜ ಸೇವೆ ಮಾಡಬಹುದು,ದ.ಕ ಶಾಮಿಯಾನ ಮಾಲಕರ ಸಂಘಟನೆಯ ಇಂತಹ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ.ಮುರಳಿಕೃಷ್ಣ ಇರ್ವತ್ರಾಯ ಹೇಳಿದರು.

ಅವರು ದ.ಕ ಶಾಮಿಯಾನ ಮಾಲಕರ ಸಂಘ (ರಿ) ಬೆಳ್ತಂಗಡಿ ಘಟಕದ ವತಿಯಿಂದ ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲೆ ಸಹಯೋಗದೊಂದಿಗೆ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು. ಕೆ ವಹಿಸಿದ್ದರು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶಿವಾನಂದ ಸ್ವಾಮಿ ಶ್ರೀ ಲಕ್ಷ್ಮೀ ಕ್ಲಿನಿಕ್ ಎರ್ಮಾಲಪಲ್ಕೆ ,ದ.ಕ ರೆಡ್ ಕ್ರಾಸ್ ಮೆಡಿಕಲ್ ಆಫಿಸರ್ ಡಾ.ಜೆ ಎನ್ ಭಟ್, ದ.ಕ ಜಿಲ್ಲಾ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಶ್ರೀ ಪ್ರಭಾಕರ ಶರ್ಮಾ ,ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಯಶವಂತ ಪಟವರ್ಧನ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ದಲ್ಲಿ ಡಾ ಮುರಳಿಕೃಷ್ಣ ಇರ್ವತ್ರಾಯ, ಡಾ.ಶಿವಾನಂದ ಸ್ವಾಮಿ ಮೊದಲಾದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

error: Content is protected !!