ಉದ್ಯಮಿ ರಾಜೇಶ್ ಶೆಟ್ಟಿ ಮನೆಗೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ

ಗುರುವಾಯನಕೆರೆ: ಧರ್ಮಸ್ಥಳದ ಚತುಷ್ಪಥ ರಸ್ತೆ ಲೋಕಾರ್ಪಣೆ, ಅನಾರು ಸೇತುವೆ ಶಿಲಾನ್ಯಾಸ ಹಾಗೂ ಬೆಳ್ತಂಗಡಿ ನೂತನ ನಿರೀಕ್ಷಣಾ ಮಂದಿರ ಶಿಲಾನ್ಯಾಸಕ್ಕೆ ಬೆಳ್ತಂಗಡಿಗೆ ಆಗಮಿಸಿದ ಉಪಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಗುರುವಾಯನಕೆರೆಯ ಉದ್ಯಮಿ ನವಶಕ್ತಿ ರಾಜೇಶ್ ಶೆಟ್ಟಿಯವರ ಮನೆಗೆ ಭೇಟಿ ನೀಡಿದರು.

ರಾಜೇಶ್ ಶೆಟ್ಟಿ ಮನೆಯವರು ಸಚಿವರನ್ನು ಆದರದಿಂದ ಸ್ವಾಗತಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಅಜಿತ್ ಕುಮಾರ್ ಕೊರ್ಯರ್, ರವಿ ಚಕ್ಕಿತ್ತಾಯ, ರಕ್ಷಿತ್ ಪಣೆಕ್ಕರ ಅಳದಂಗಡಿ ಶಕ್ತಿ ಕೇಂದ್ರ ಅಧ್ಯಕ್ಷ ಸದಾನಂದ ಉಂಗಿಲಬೈಲು, ತಾ.ಪಂ ಸದಸ್ಯ ಸುಧೀರ್ ಸುವರ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!