ನಾಡಿನಲ್ಲೇ ಉಳಿದ ಕಾಡಾನೆ‌ ಮರಿ: ಕಡಿರುದ್ಯಾವರದಲ್ಲಿ ಕಾಡಾನೆ‌ ಹಿಂಡಿನಿಂದ ಕೃಷಿಗೆ ಹಾನಿ

 

 

 

 

 

 

 

 

 

 

 

ಕಡಿರುದ್ಯಾವರ: ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಮರಿ ಆನೆಯೊಂದು ನಾಡಿನಲ್ಲೇ ಉಳಿದ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ‌ನಡೆದಿದೆ.

ಅ.29ರಂದು ರಾತ್ರಿ ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ಆನೆಗಳ ಹಿಂಡು ನುಗ್ಗಿದ್ದು, ಅಡಕೆ ತೋಟ ಹಾಗೂ ಇತರ ಕೃಷಿಗಳಿಗೆ ಹಾನಿ ಮಾಡಿವೆ. ಈ‌ ಸಂದರ್ಭ ಹಿಂಡಿನಲ್ಲಿದ್ದ ಮರಿ ಆನೆ ತೋಟದಲ್ಲೇ ಉಳಿದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಹಾಗೂ‌ ಸಿಬ್ಬಂದಿ ಸ್ಥಳಕ್ಕೆ ತೆರಳಿ‌ದ್ದು, ಮರಿ ಆನೆಯ ರಕ್ಷಣಾ ಕಾರ್ಯ ನಡೆಸಲಿದ್ದಾರೆ. ಸಧ್ಯ ಸ್ಥಳೀಯರು ಸೇರಿ ಮರಿ ಆನೆಯನ್ನು ರಕ್ಷಿಸುವ ಕಾರ್ಯ ನಡೆಸಿದ್ದಾರೆ. ಮರಿ ಆನೆ ತೋಟದಲ್ಲಿ ಉಳಿದಿರುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಇದನ್ನು ನೋಡಲು ಜನಜಂಗುಳಿ ಸೇರಿದೆ.

error: Content is protected !!