ಪಡ್ಲಾಡಿ, 35 ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ,: ಅಧ್ಯಕ್ಷರಾಗಿ ಅನಿಲ್ ವಿಕ್ರಂ, ,ಕಾರ್ಯದರ್ಶಿ, ಶಿವರಾಜ್, ಕೋಶಾಧಿಕಾರಿ ಅಕ್ಷತ್: ಗೌರವಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಎಣಿಂಜೆ ಆಯ್ಕೆ:

 

ಬೆಳ್ತಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ. ಇದರ ವಾರ್ಷಿಕ ಸಭೆಯು ಉತ್ಸಾಹಿ ಯುವಕ ಮಂಡಲ ಪಡ್ಲಾಡಿಯಲ್ಲಿ  ಜುಲೈ 26 ರಂದು  ಸಮಿತಿಯ ಅಧ್ಯಕ್ಷ ವಿನಯ್ ಪಡ್ಲಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ 2025ನೇ ಸಾಲಿನ ಕಾರ್ಯಕ್ರಮಗಳ ವರದಿ ಜಮಾ ಖರ್ಚಿನ ವಿವರಗಳನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆಯಲಾಯಿತು. ನಂತರ 2026-27ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಪತ್ರಕರ್ತ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ
ಅಧ್ಯಕ್ಷರಾಗಿ ಅನಿಲ್ ವಿಕ್ರಂ ಡಿಸೋಜ ,ಕಾರ್ಯದರ್ಶಿಯಾಗಿ ಶಿವರಾಜ್ ಅಂಕಾಜೆ, ಕೋಶಾಧಿಕಾರಿಯಾಗಿ ಅಕ್ಷತ್ ನಿನ್ನಿಕಲ್ಲು , ಜೊತೆ ಕಾರ್ಯದರ್ಶಿಯಾಗಿ ಹರೀಶ್ ನೆನಪು, ಜೊತೆ ಕೋಶಾಧಿಕಾರಿಯಾಗಿ ಸುರೇಂದ್ರ ಪುದ್ದೊಟ್ಟು,  ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಪ್ಟೆಂಬರ್ 04 ರಂದು 35 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಪಡ್ಲಾಡಿ ಶಾಲಾ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ, ಇನ್ನಿತರ ಸೇವಾ ಚಟುವಟಿಕೆಗಳನ್ನು ಆಯೋಜಿಸುವ ಬಗ್ಗೆ ತೀರ್ಮಾನಿಸಿ  ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ  ಚರ್ಚಿಸಲಾಯಿತು. ಈ ವೇಳೆ ಅಧ್ಯಕ್ಷ ಅನಿಲ್ ವಿಕ್ರಂ, ಡಿಸೋಜ ,
ಎಲ್ಲರ ಸಹಕಾರ ಕೋರಿದರು.ಗೌರವಾಧ್ಯಕ್ಷ ಪ್ರಸಾದ್ ಶೆಟ್ಟಿ ಮಾತನಾಡಿ ಪಡ್ಲಾಡಿಯಲ್ಲಿ ನಡೆಯುತ್ತಿರುವ ಮೊಸರು ಕುಡಿಕೆ ಉತ್ಸವ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಡೆಯುತಿದ್ದು, ಅಚ್ಚು ಕಟ್ಟು ಕಾರ್ಯಕ್ರಮ, ದಾನಿಗಳ ಸಹಕಾರದಲ್ಲಿ ಒಂದಷ್ಟು ಸೇವಾ ಯೋಜನೆಗಳನ್ಬು ಹಮ್ಮಿಕೊಂಡಿರುವ ಸಮಿತಿಯ ಬಗ್ಗೆ  ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸುತಿದ್ದಾರೆ ಎಂದರು.

ಕೊನೆಯಲ್ಲಿ ಕಾರ್ಯದರ್ಶಿ ಶಿವರಾಜ್ ಧನ್ಯವಾದವಿತ್ತರು.

error: Content is protected !!