ಬಿಗ್ ಬಾಸ್‌ಗೆ ವಿದಾಯ ಹೇಳಲು ಮುಂದಾದ ಕಿಚ್ಚ ಸುದೀಪ್..!: ಸೀಸನ್ 11ರ ಮೂರನೇ ವಾರಕ್ಕೆ ದೊಡ್ಡ ನಿರ್ಧಾರ: ಅಭಿಮಾನಿಗಳಿಗೆ ಬಿಗ್ ಶಾಕ್..!

ಬಿಗ್ ಬಾಸ್ ಕನ್ನಡ ಶೋ ಯಾರಿಗೆ ಎಷ್ಟು ಇಷ್ಟಾನೋ ಗೊತ್ತಿಲ್ಲ. ಆದರೆ ವಾರದ ಕತೆ ಕೇಳೋಕೆ ಮಾತ್ರ ಜನ ಟಿವಿ ಮುಂದೆ ಕಾದು ಕುಳಿತಿರುತ್ತಾರೆ. ಕಿಚ್ಚನ ಪಂಚಾಯತಿ ಅಂದ್ರೆ ಜನರಿಗೆ ತುಂಬಾ ಇಷ್ಟ. ನಗು, ತರ್ಲೆ, ಸ್ವಲ್ಪ ಕೋಪ, ಬೈಗುಳ, ಪ್ರಶ್ನೆ ಎಲ್ಲವೂ ಸೇರಿ ‘ವಾರದ ಕತೆ ಕಿಚ್ಚನ ಜೊತೆ’ ಒಂದು ಅದ್ಭುತ ಕಾರ್ಯಕ್ರಮವಾಗಿತ್ತು. ಒಂದಿಷ್ಟು ಜನ ಸುದೀಪ್ ಅವರನ್ನು ನೋಡೋಕೆ ಅಂತಾನೆ ಬಿಗ್ ಬಾಸ್ ನೋಡುತ್ತಾರೆ. ಆದರೆ ಕಿಚ್ಚ ಸುದೀಪ್ ಬಿಗ್ ಬಾಸ್‌ಗೆ ವಿದಾಯ ಹೇಳುವುದಾಗಿ ಸೂಚನೆ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ಸುದ್ದಿಯಾಗಿದೆ.

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ನಡೆಯುತ್ತಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಕಿಚ್ಚ ಸುದೀಪ್ ಈ ಬಾರಿ ಬಿಗ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ 2ವಾರ ಅವರೇ ಕಾರ್ಯಕ್ರಮದಲ್ಲಿದ್ದರು. ಈಗ ಮೂರನೆ ವಾರಕ್ಕೆ ಬಿಬಿಕೆ ಕಾಲಿಡುತ್ತಿರುವಾಗ ಸುದೀಪ್ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ತಾನು ಬಿಗ್ ಬಾಸ್ ಕಾರ್ಯಕ್ರಮದ ನಿರೂಪನೆಯಿಂದ ದೂರ ಸರಿಯುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ಟಿಆರ್‌ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿದ ಪ್ರೀತಿ ಏನೆಂಬುದು ತಿಳಿಯುತ್ತೆ. ಈ 11 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಬಹಳ ಅದ್ಭುತವಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನಹರಿಸುವ ಸಮಯ ಬಂದಿದೆ. ಇದು ಬಿಗ್ ಬಾಸ್ ಕನ್ನಡಕ್ಕೆ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ಕಲರ್ಸ್ನವರು ಹಾಗೂ ಇಷ್ಟು ವರ್ಷಗಳಿಂದ ಬಿಗ್ ಬಾಸ್ ನೋಡಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬಿದ್ದೇನೆ. ಈ ಸೀಸನ್ ಅತ್ಯುತ್ತಮ ಆಗುವಂತೆ ಮಾಡೋಣ. ನಾನು ಕೂಡ ನಿಮ್ಮೆಲ್ಲರನ್ನು ರಂಜಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

error: Content is protected !!