ಶಿರೂರು: ಗಂಗಾವಳಿ ನದಿಯಲ್ಲಿ ಲಾರಿಯ ಇಂಜಿನ್ ಮತ್ತು ಕ್ಯಾಬಿನ್ ಪತ್ತೆ..!

ಶಿರೂರು: ಗುಡ್ಡ ಕುಸಿದ ಘಟನೆಯಲ್ಲಿ ನಾಪತ್ತೆಯಾದರನ್ನು ಗಂಗಾವಳಿ ನದಿಯಲ್ಲಿ ಡ್ರಜ್ಜಿಂಗ್ ಯಂತ್ರದ ಮೂಲಕ ಹುಡುಕಾಟ ನಡೆಸಲಾಗುತ್ತಿದ್ದು ನದಿ ನೀರಿನಡಿ ಮಣ್ಣಿನಲ್ಲಿ ಹೂತು ಹೋಗಿದ್ದ ಲಾರಿ ಇಂಜಿನ್, ಕ್ಯಾಬಿನ್ ನನ್ನು ಇಂದು ಮೇಲೆತ್ತಲಾಗಿದೆ.

ಇಂದು ಮುಂಜಾನೆಯಿಂದ ಆರಂಭವಾದ ಕಾರ್ಯಾಚರಣೆ ವೇಳೆ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ ಮಾಡಿ ಅದನ್ನು ಕ್ರೇನ್ ಮೂಲಕ ಕಾರ್ಮಿಕರು ಮೇಲಕ್ಕೆತ್ತಿದರು. ಆದರೆ ಇದು ಗ್ಯಾಸ್ ಟ್ಯಾಂಕರ್ ಇಂಜಿನ್ ಇರಬಹುದೆಂದು ಶಂಕಿಸಲಾಗಿದೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.

error: Content is protected !!