ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ: ನೂತನ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಆರ್.ರಮೇಶ್ ಲಾಯಿಲ

ಆರ್.ರಮೇಶ್ 

 ನೂತನ ಅಧ್ಯಕ್ಷ


ಲಾಯಿಲ:
ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ ಇದರ ವತಿಯಿಂದ ನಡೆಯುವ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ವಿಘ್ನೇಶ್ವರ ಕಲಾಮಂದಿರದಲ್ಲಿ ನಡೆಯಿತು.

ಅರವಿಂದ್ ಕುಮಾರ್ 

 ಕಾರ್ಯದರ್ಶಿ

ನೂತನ ಅಧ್ಯಕ್ಷರಾಗಿ ಆರ್.ರಮೇಶ್ ಲಾಯಿಲ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಅರವಿಂದ್ ಕುಮಾರ್ ರಾಘವೇಂದ್ರ ನಗರ, ಪ್ರಧಾನ ಕಾರ್ಯದರ್ಶಿಯಾಗಿ ರುಕ್ಮಯ ಕನ್ನಾಜೆ, ಕೋಶಾಧಿಕಾರಿಯಾಗಿ ಸುರೇಂದ್ರ ಎಲ್.ಜೆ ಉಪಾಧ್ಯಕ್ಷರಾಗಿ ಪ್ರಕಾಶ್ ಕಾಶಿಬೆಟ್ಟು, ಗಂಗಾಧರ್ ಹೆಗ್ಡೆ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಗಣೇಶ್ ಲಾಯಿಲ, ಚಿನ್ನಯ ಕುಲಾಲ್, ಅನ್ನದಾನ ಸಮಿತಿ ಸಂಚಾಲಕರಾಗಿ ಸುರೇಶ್ ಬರೆಮೇಲು , ಸದಸ್ಯರಾಗಿ ಅನಿಲ್ ಕಕ್ಕೆನ, ಸುಜಿತ್ ಗುರಿಂಗಾನ, ಸೀತಾರಾಮ ಹೆಗ್ಡೆ, ಶಶಿಕುಮಾರ್ ಅಯೋಧ್ಯನಗರ, ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.


ಸುರೇಂದ್ರ ಎಲ್.ಜೆ 

ಕೋಶಾಧಿಕಾರಿ

ಈ ಸಂದರ್ಭದಲ್ಲಿ ಸಮಿತಿಯ ಹಿರಿಯ ಸಲಹೆಗಾರರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.

error: Content is protected !!