ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ : ಪ್ರತಿಷ್ಠಾವರ್ಧಂತಿ, ವಿಶೇಷ ಶತರುದ್ರಾಭಿಷೇಕ:

 

 

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಢವರ್ಧಂತಿ ಹಾಗೂ ವಿಶೇಷ ಶತರುದ್ರಭಿಷೇಕ , ರುದ್ರ ಪಾರಾಯಣ ಗಣಹೋಮ, ಮಹಾಪೂಜೆ ನಡೆಯಿತು. ಊರಿನ , ಪರವೂರಿನ ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು. ತನ್ನ ಇಷ್ಟಾರ್ಥ ಈಡೇರಿಸುವಂತೆ ಅಭಯ ನಂದಿಯಲ್ಲಿ ಪ್ರಾರ್ಥಿಸಿದರು. ಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಿತು.

error: Content is protected !!