ಬೆಳ್ತಂಗಡಿ: ಯುವ ವಕೀಲ ನಿಧನ

ಬೆಳ್ತಂಗಡಿ: ಉರುವಾಲು ಗ್ರಾಮದ ಮುರತ್ತಕೋಡಿ ನಿವಾಸಿ, ಬೆಳ್ತಂಗಡಿಯ ಯುವ ನ್ಯಾಯವಾದಿ ಪ್ರಜ್ವಲ್ (33) ರವರು ಏ.17ರಂದು ನಿಧನರಾದರು.

ಬೆಳ್ತಂಗಡಿಯ ನ್ಯಾಯವಾದಿ ಸಂತೋಷ್ ಕುಮಾರ್ ರವರ ಸಹಾಯಕ ನ್ಯಾಯವಾದಿಯಾಗಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರು ಅಲ್ಪ ಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

error: Content is protected !!