ಚಾರ್ಮಾಡಿ ಘಾಟ್ ಮರ ಬಿದ್ದು ತಾಸುಗಟ್ಟಲೆ   ಟ್ರಾಫಿಕ್ ಜಾಮ್: ಮರ ತೆರವುಗೊಳಿಸಿದ ಸ್ಥಳೀಯರು:

 

 

 

ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಳೆಗೆ  ಮರಗಳು ಉರುಳಿ ಬಿದ್ದ ಪರಿಣಾಮ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೆ 30ರಂದು  ನಡೆದಿದೆ.ತಾಲೂಕಿನಾದ್ಯಂತ ಇಂದು ಭಾರೀ ಮಳೆಯಾಗುತಿದ್ದು  ಇದರಿಂದಾಗಿ
ಚಾರ್ಮಾಡಿ ಘಾಟ್ ರಸ್ತೆಯ 8 ನೇ ತಿರುವಿನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ  ಮೂರು  ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ತಡೆಯುಂಟಾಗಿ ವಾಹನ ಸಂಚಾರಕ್ಕೆ ತೊಂದೆರಯುಂಟಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುಮಾರು 2 ಗಂಟೆಗಳಿಗೂ ಅಧಿಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.

error: Content is protected !!